ಸಂಭ್ರಮದ ಹಿಂದೂ ಮಹಾಗಣಪತಿ ಶೋಭಾಯಾತ್ರೆ
Festive Hindu Maha Ganapati procession
ಹೂವಿನಹಡಗಲಿ 08: ಪಟ್ಟಣದ ಆಂಜನೇಯ ದೇವಸ್ಥಾನ ಬಳಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಗತಿ 11ದಿನದ ಶೋಭಾಯಾತ್ರೆಗೆ ಶಾಸಕ ಕೃಷ್ಣನಾಯಕ ಸೋಮವಾರ ಚಾಲನೆ ನೀಡಿದರು. ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮೆರವಣಿಗೆ ಸಾಗಿದ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಜನರು ಶೋಭಾಯಾತ್ರೆಯ ಸೊಬಗು ಕಣ್ತುಂಬಿ ಕೊಂಡರು. ಹಿಂದೂ ಮಹಾಗಣಪತಿಗೆ ಜಯಕರ ಕೂಗಿ ಭಕ್ತಿ ಸಮರ್ಿಸಿದರು.ಶೋಭಾಯಾತ್ರೆಯಲ್ಲಿ ಸಮಾವೇಶಗೊಂಡಿದ್ದ ನೂರಾರು ಸಂಖ್ಯೆಯ ಯುವಕರು ಡಿಜೆ ಲಯಕ್ಕೆ ಶಾಸಕ ಕೃಷ್ಣನಾಯಕ. ಬೆಂಬಲಿಗರು .ಹಿಂದೂ ಮಹಾಗಣಪತಿ ಪದಾಧಿಕಾರಿಗಳು. ಯುವಕರುಹೆಜ್ಜೆಹಾಕಿ ನೃತ್ಯ ಮಾಡುತ್ತಿರುವುದು ಗಮನಸೆಳೆಯಿತು.ಸಂಜೆ 5ಕ್ಕೆ ಪ್ರಾರಂಭಗೊಂಡ ಶೋಭಾಯಾತ್ರೆ ಮಧ್ಯರಾತ್ರಿ 12 ಗಂಟೆಗೆ ಮದಲಗಟ್ಟಿ ಗ್ರಾಮ ಬಳಿ ಇರುವ ತುಂಗಭದ್ರಾ ನದಿಗೆ ತಲುಪಿತು. ನಂತರ ವಿಘ್ನನಿವಾರಕನನ್ನು ವಿಸರ್ಜನೆ ಮಾಡಲಾಯಿತು.
ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಹಿಂದೂ ಮಹಾಗಣಪತಿ ಸಮಿತಿಯಿಂದ ಶಾಸಕ ಕೃಷ್ಣನಾಯಕ. ರಾಷ್ಷಪತಿ ಪದಕ ಪಡೆದ ಡಿವೈಎಸ್ಪಿ ಮತ್ತು ಸಿಪಿಐ ದೀಪಕ್ ಬೋಸರೆಡ್ಡಿ ಇತರರನ್ನು ಸನ್ಮಾನಿಸಲಾಯಿತು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 