ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿಗೆ ಸನ್ಮಾನ

ರಬಕವಿ-ಬನಹಟ್ಟಿ 10: ಉತ್ತಮ ನಾಗರಿಕನಾಗುವಲ್ಲಿ ಶಿಕ್ಷಣವೂ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನನ್ನು ದಾರ್ಶನಿಕನನ್ನಾಗಿ ಮಾಡುವ ಮೂಲಕ ಅವನೊಳಗಿನ ಆಲೋಚನೆಗಳ ಹರಿವಿಗೆ ಸರಿಯಾದ ದಿಕ್ಕನ್ನು ಒದಗಿಸುವಂತಹ ಅಗತ್ಯ ಕೆಲಸವನ್ನು ಶಿಕ್ಷಣ ಮಾಡುತ್ತದೆ, ಆದರೆ ಮನುಷ್ಯನಿಗೆ ಸರಿಯಾದ ಮಾರ್ಗದರ್ಶನ ನೀಡುವ ಸರಿಯಾದ ಶಿಕ್ಷಕ ಸಿಕ್ಕಾಗ ಮಾತ್ರ ಇದು ಸಾಧ್ಯ. ಮನುಷ್ಯನನ್ನು ಸಮರ್ಥನನ್ನಾಗಿ ಮಾಡುವ ಕೆಲಸವನ್ನು ಶಿಕ್ಷಕರಿಂದ ಮಾಡಲಾಗುತ್ತದೆ. ಆದ್ದರಿಂದ ಶಿಕ್ಷಣ ವೃತ್ತಿ ಸಮಾಜದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ತೇರದಾಳ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಧುರೀಣ ಸಿದ್ದು ಆರ್‌. ಕೊಣ್ಣೂರ ಹೇಳಿದರು. 

ತಮ್ಮ ನಿವಾಸದಲ್ಲಿ ರಾಷ್ಟ್ರ ಮಟ್ಟದ ಅತ್ಯುತ್ತಮ ಪ್ರಶಸ್ತಿ ಪಡೆದ ಶಿಕ್ಷಕಿ ಸಪ್ನಾ ಅನಿಗೋಳ ಅವರನ್ನು ಸನ್ಮಾನಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಭರಮು ಉಳ್ಳಾಗಡ್ಡಿ ಸೇರಿದಂತೆ ಹಿರಿಯರು, ಮಹಿಳಾ ಕಾರ್ಯರ್ತರು ಉಪಸ್ಥಿತರಿದ್ದರು.