ಮೈಸೂರಿನಲ್ಲಿ ಮೊದಲ ರಾಜಮಾತೆ ಕೆಂಪನಂಜಮ್ಮಣ್ಣಿ ಪ್ರತಿಮೆ ಸ್ಥಾಪನೆ
ಮೈಸೂರು, ಜೂನ್ 28: ನಗರದ ಸಿಎಫ್ಟಿಆರ್ಐ ಕಾಂಪೌಂಡ್ ಎದುರಿನ ವಾಣಿ ವಿಲಾಸ್ ವಾಟರ್ ವರ್ಕ್ಸ್ (ವಿವಿಡಬ್ಲ್ಯುಡಬ್ಲ್ಯೂ) ಬಳಿ ಪ್ರತಿಮೆಯನ್ನು ಹೊಂದಿರುವ ವಾಟರ್ ಥೀಮ್ ಪಾರ್ಕ್ ಮೊದಲ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಸ್ಥಾಪಿಸಲಾಗುವುದು. ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನವು ಪ್ರತಿಮೆಯನ್ನು ಹೊಂದಿರುವ ಥೀಮ್ ಪಾರ್ಕ್ ಆಗಿರುತ್ತದೆ. ಥೀಮ್ ಪಾರ್ಕ್ ಅನ್ನು ಮೈಸೂರು ಮಹಾನಗರಪಾಲಿಕೆ (ಎಂಸಿಸಿ) ಸ್ಥಾಪಿಸಲಿದ್ದು, ಸಮಗ್ರ ಯೋಜನಾವರದಿ (ಡಿಪಿಆರ್) ತಯಾರಿಸಲು ಸೂಕ್ತವಾದ ಸಲಹಾ ಸಂಸ್ಥೆಯನ್ನು ಆಯ್ಕೆ ಮಾಡಲು ಟೆಂಡರ್ ಕರೆಯಲಾಗಿದೆ.
ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಎರಡು ಎಕರೆ ಜಮೀನಿನಲ್ಲಿ ಪಾರ್ಕ್ ನಿರ್ಮಿಸಲಾಗುವುದು. ಮೇಯರ್ ತಸ್ನೀಮ್ ಇತ್ತೀಚೆಗೆ ನವೀಕರಿಸಿದ ಸಭಾಂಗಣದಲ್ಲಿ ವಿ.ವಿ.ಡಬ್ಲ್ಯು.ಡಬ್ಲ್ಯೂ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಅಧಿಕಾರಿಗಳು ಥೀಮ್ ಪಾರ್ಕ್ ನ ವಿನ್ಯಾಸ, ವ್ಯಾಪ್ತಿ, ಸೌಲಭ್ಯಗಳು ಮತ್ತು ಆಕರ್ಷಣೆಗಳ ಬಗ್ಗೆ ವಿವರಿಸಿದರು. ಥೀಮ್ ಪಾರ್ಕ್ ನಲ್ಲಿ ಸಾಂಪ್ರದಾಯಿಕ ಯೋಗ ಭಂಗಿಗಳು ಮತ್ತು ಕೆಂಪನಂಜಮ್ಮಣ್ಣಿಯವರ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಅಲ್ಲದೆ, ಬೃಹತ್ ಗೋಪುರ ಮತ್ತು ಗೋಪುರದ ಮೇಲೆ ಕಾವೇರಿ ಮಾತೆಯ ಪ್ರತಿಮೆಯನ್ನು ನಿರ್ಮಿಸುವ ಯೋಜನೆಯಿದೆ.ಪ್ರವಾಸಿಗರಿಗೆ ಥೀಮ್ ಪಾರ್ಕ್ ಪ್ರಮುಖ ಆಕರ್ಷಣೆಯಾಗಲಿದೆ ಎಂದಿರುವ ಮೇಯರ್ ತಸ್ನೀಮ್, ಹತ್ತಿರದ ರೈಲು ವಸ್ತುಸಂಗ್ರಹಾಲಯವನ್ನು ನೋಡಿದ ನಂತರ ಉದ್ಯಾನವನವನ್ನು ವೀಕ್ಷಿಸಬಹುದಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 