ನಾಟಕಗಳು ಸಾಮಾಜಿಕ ಪ್ರಜ್ಞೆ ಮೂಡಿಸುತ್ತವೆ
Dramas create social awareness
ಲೋಕದರ್ಶನ ವರದಿ
ಹೂವಿನ ಹಡಗಲಿ: 03- ನಾಟಕಗಳು ಸಾಮಾಜಿಕ ಪ್ರಜ್ಞೆ ಅರಿವು ಮೂಡಿಸುತ್ತವೆ ಎಂದು ಶಾಸಕ ಎಲ್ ಕೃಷ್ಣನಾಯಕ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಹಿರೇಮಲ್ಲಿನ ಕೇರಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದ ಪ್ರಯುಕ್ತ ನಡೆದ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ ಹಬ್ಬ ಧಾರ್ಮಿಕ ಉತ್ಸವ ನಿಮಿತ್ತ ಸಂಸ್ಕೃತಿ ಬಿಂಬಿಸುವಕಂಪನಿ ಸಾಮಾಜಿಕ ನಾಟಕಗಳನ್ನು ಹಳ್ಳಿಯ ಜನರೇ ಸ್ವಂತ ದುಡಿಮೆಯಿಂದ ಹಣ ಹೊಂದಿಸಿಕೊಂಡು ಪ್ರದರ್ಶನ ಮಾಡುವ ಕಾರ್ಯ ಅನನ್ಯ ಎಂದು ಬಣ್ಣಿಸಿದರು. ಸಾನಿಧ್ಯವನ್ನು ಶ್ರೀ ಚನ್ನಬಸವೇಶ್ವರ ಸ್ವಾಮಿಗಳು ವಹಿಸಿದ್ದರು . ಮುಖಂಡರಾದ ವಾರದ್ ಗೌಸ್ ಮೋಹಿದ್ದಿನ್. ಈ ಟಿ ಲಿಂಗರಾಜ್,ಕೊಟ್ರೇಶ್ ನಾಯಕ್. ಡಂಬಳದ ನಾಗರಾಜ್. ದೇವಲಾ ನಾಯಕ್. ಶ್ರೀಮತಿ ರೇಣುಕಮ್ಮ. ಆರ್ ಮಲ್ಲಣ್ಣ. ಡಿ ಆಂಜನೇಯ. ಹೊಂಬಳ ನಾಗರಾಜ್. ಎಂ ಎಲ್ಲಪ್ಪ. ರಾಮಣ್ಣ. ಎಚ್ ಪ್ರಕಾಶ. ಅಂಜಿನಪ್ಪ. ಎಂ ಪರಮೇಶ. ಕೆ ವಿಜಯ್ ಕುಮಾರ್ ಅನೇಕ ಹಿರಿಯ ಮುಖಂಡರು ಹಾಗೂ ಶ್ರೀ ಆಂಜನೇಯ ಸ್ವಾಮಿಯ ಭಕ್ತರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 