ವಿಭಾಗೀಯ ಮಟ್ಟದ ಪಿಂಚಣಿ, ಅಂಚೆ ಅದಾಲತ್
ಬೆಂಗಳೂರು, ಜೂ 11, ವಿಭಾಗೀಯ ಮಟ್ಟದ ಅಂಚೆ ಮತ್ತು ಪಿಂಚಣಿ ಅದಾಲತ್ ಗಳನ್ನು ಆಯೋಜಿಸಲಾಗಿದೆ. ವಿಭಾಗೀಯ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಇದೇ 20 ರಂದು ಬೆಳಿಗ್ಗೆ 11.00 ಕ್ಕೆ ಮುಖ್ಯ ಪೋಸ್ಟ್ ಮಾಸ್ಟರ್ ಕಚೇರಿ, ಬೆಂಗಳೂರು ಜಿ.ಪಿ.ಒ., ಬೆಂಗಳೂರು-560001 ಇಲ್ಲಿ ನಡೆಯಲಿದೆ.ಬೆಂಗಳೂರು ಜಿ.ಪಿ.ಒ.ದಿಂದ ಪಿಂಚಣಿ ಪಡೆಯುತ್ತಿರುವ ಮತ್ತು ಅವರ ಪಿಂಚಣಿ ವಿಷಯಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳನ್ನು ಹೊಂದಿರುವ ಪಿಂಚಣಿದಾರರು, ಅವರ ಕುಟುಂಬ ಪಿಂಚಣಿದಾರರು ತಮ್ಮ ದೂರುಗಳನ್ನು ಇದೇ 17 ರ ಮೊದಲು ಪೂರ್ಣ ಪಿ.ಪಿ.ಒ. ವಿವರಗಳೊಂದಿಗೆ ಸಲ್ಲಿಸಬಹುದು. ಪಿಂಚಣಿ ಅದಾಲತ್ ಗೆ ಪಿಂಚಣಿದಾರರು ಬೆಂಗಳೂರು ಜಿ.ಪಿ.ಒ., ಮುಖ್ಯ ಪೋಸ್ಟ್ ಮಾಸ್ಟರ್ ಕಚೇರಿಯಲ್ಲಿ ವೈಯಕ್ತಿಕವಾಗಿ ಹಾಜರಾಗಬಹುದು.
ಸಂಪರ್ಕ ಸಂಖ್ಯೆ: 080 22850001, ಇಮೈಲ್: cpmbangaloregpo@indiapost.gov.inವಿಭಾಗೀಯ ಹಂತದ ಅಂಚೆ ಅದಾಲತ್ ಕಾರ್ಯಕ್ರಮ ಮುಖ್ಯ ಪೋಸ್ಟ್ ಮಾಸ್ಟರ್ ಅವರ ಕಚೇರಿ, ಬೆಂಗಳೂರು ಜಿಪಿಒ, ಬೆಂಗಳೂರು -560001ಇಲ್ಲಿ ಇದೇ 23 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ಬೆಂಗಳೂರು ಜಿ.ಪಿ.ಒ. ವಿತರಣಾ ವ್ಯಾಪ್ತಿಯಲ್ಲಿ ವಾಸಿಸುವ ಗ್ರಾಹಕರು ಮತ್ತು ಬೆಂಗಳೂರು ಇ.ಪಿ.ಒ.ನಲ್ಲಿ ಉಳಿತಾಯ ಬ್ಯಾಂಕ್ ಸೇರಿದಂತೆ ಸೌಲಭ್ಯಗಳನ್ನು ಪಡೆದುಕೊಳ್ಳುವವರು ತಮ್ಮ ಕುಂದುಕೊರತೆಗಳನ್ನು ಮತ್ತು ಸಲಹೆಗಳನ್ನು ನೀಡಲು ಬಯಸುವವರು ಮುಖ್ಯ ಪೋಸ್ಟ್ ಮಾಸ್ಟರ್, ಬೆಂಗಳೂರು ಜಿ.ಪಿ.ಒ. ಕಚೇರಿಗೆ ಇದೇ 19 ರ ಮೊದಲು ತಲುಪಿಸಿಕೊಡಬಹುದು.ಬೆಂಗಳೂರು ಜಿ.ಪಿ.ಒ ಮುಖ್ಯ ಪೋಸ್ಟ್ ಮಾಸ್ಟರ್ ಅವರ ಕಚೇರಿಯಲ್ಲಿ ಜರುಗುವ ಅಂಚೆ ಅದಾಲತ್ ಕಾರ್ಯಕ್ರಮದಲ್ಲಿ ಪಿಂಚಣಿ ಸದಸ್ಯರು ಸ್ವತಃ ಹಾಜರಾಗಬಹುದು.ಸಂಪರ್ಕ ಸಂಖ್ಯೆ: 080 22850001
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 