ದಿವ್ಯಾಂಗರಿಗೆ ಶಾಸಕರಿಂದ ತಿಚಕ್ರ ವಾಹನಗಳ ವಿತರಣೆ
ಕಲಬುರಗಿ, ಮೇ 12,ಕಲಬುರಗಿ ಮಹಾನಗರ ಪಾಲಿಕೆಯ 2011-12 ರಿಂದ 2014-15ನೇ ಸಾಲಿನ ವರೆಗಿನ ಎಸ್.ಎಫ್.ಸಿ., ಪಾಲಿಕೆ ನಿಧಿ ಹಾಗೂ ಉಳಿತಾಯ ಅನುದಾನದಡಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅರ್ಹ 46 ಜನ ವಿಶಿಷ್ಟ ಚೇತನರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ಸಿ. ರೇವೂರ ಅವರು ತ್ರಿಚಕ್ರ ವಾಹನಗಳನ್ನು ಮಂಗಳವಾರ ವಿತರಿಸಿದರು. ನಗರದ ಜೇವರ್ಗಿ ರಸ್ತೆಯ ಮುಕ್ತಾ ಟಾಕೀಸ್ ಬಳಿಯ ವೆಂಕಟೇಶ್ವರ ಅಟೋಮೋಟಿಸ್ ಶೋರಂ ಅಂಗಡಿಯಲ್ಲಿ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ, ಉಪ ಆಯುಕ್ತ (ಆಡಳಿತ) ಎಂ.ಡಿ. ಸಾದಾತ್ ಹುಸೇನ್, ಪರಿಸರ ಅಭಿಯಂತರ ಮುನಾಫ್ ಪಟೇಲ್, ಶೋರೂಂ ವ್ಯವಸ್ಥಾಪಕ ಹೃಷಿಕೇಶ ದೇಶಪಾಂಡೆ ಸೇರಿ ಮಹಾನಗರ ಪಾಲಿಕೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 