ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ ಜೀವನಚರಿತ್ರೆ ಪ್ರವಚನ

ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ ಜೀವನಚರಿತ್ರೆ ಪ್ರವಚನ  Discourse on the biography of Channavrushabhendra Devarakonda Ajjanavaru


ಮದನಬಾವಿ, ಸೆ.15: ಸಮೀಪದ ಮದನಬಾವಿ ಗ್ರಾಮದ ಶ್ರೀ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ (ಐನಬಾಂವಿ) ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ ಜೀವನಚರಿತ್ರೆ ಕುರಿತು ಪ್ರವಚನ ಕಾರ್ಯಕ್ರಮ ನಡೆಯಿತು.  

ಅಶೋಕ ಬೀಜಗತ್ತಿ ಅವರು ಪ್ರವಚನ ನೀಡಿ, ಅಜ್ಜನವರ ಜೀವನ ಹಾಗೂ ಆದರ್ಶಗಳನ್ನು ವಿವರಿಸಿದರು. ಶ್ರಾವಣ ಮುಕ್ತಾಯ ಸಮಾರಂಭದಲ್ಲಿ ಯರಗೊಪ್ಪ ಗ್ರಾಮದ ಶ್ರೀ ಚನ್ನವೃಷಭೇಂದ್ರ ಮಠದ ಪೂಜ್ಯ ಶಿವಪ್ಪ ಅಜ್ಜನವರ ಸಾನ್ನಿಧ್ಯದಲ್ಲಿ ಪ್ರವಚನ ಸಮಾರೋಪ ನೆರವೇರಿತು.  

ಕಾರ್ಯಕ್ರಮದಲ್ಲಿ ಮದನಬಾವಿ ಗ್ರಾಮದ ಹಿರಿಯರು ಹಾಗೂ ರೈತರು ಭಾಗವಹಿಸಿದ್ದರು.