ವಿದ್ಯುತ್ ಅವಘಡದಿಂದ ಸಾವು : 5ಲಕ್ಷ ಪರಿಹಾರ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ :   ತಾಲೂಕಿನ ಮೆಟ್ರಿ ಗ್ರಾಮದ ನಿವಾಸಿ ಅಂಬಳಿ ಭರಮಪ್ಪ  ಕೆಲ ತಿಂಗಳ ಹಿಂದೆ ವಿದ್ಯುತ್ ಅವಘಡದಿಂದ ಮೃತ ಪಟ್ಟಿದ್ದರು, ಜೆಸ್ಕಾಂನಿಂದ ಮೃತ ಕುಟುಂಬಕ್ಕೆ 5ಲಕ್ಷದ ಚೆಕ್ ಶಾಸಕ ನೇಮಿರಾಜ್ ನಾಯ್ಕ್‌ ತಮ್ಮ ನಿವಾಸದಲ್ಲಿ ಮಂಗಳವಾರ ವಿತರಿಸಿದರು. ಜೆಸ್ಕಾಂ ಎಇಇ ತೇಜಾನಾಯ್ಕ್‌ ಸೇರಿದಂತೆ ಅಧಿಕಾರಿಗಳು, ಮುಖಂಡರಾದ ಬನ್ನಿಗೋಳ್ ವೇಂಕಣ್ಣ, ಬಶೀರ್, ಜಿ.ಎಂ.ಜಗದೀಶ್, ನಾಗರಾಜ್, ವಕೀಲ ಪ್ರಕಾಶ್, ಜಿ.ಹನುಮಂತಪ್ಪ ಸೇರಿದಂತೆ ಇನ್ನಿತರರು ಇದ್ದರು.