ದಸರಾ ಕ್ರೀಡಾಕೂಟದಲ್ಲಿ ಟ್ರೋಫಿ ಗೆದ್ದ ಯುವಕರಿಗೆ ಅಭಿನಂದನೆ

ದಸರಾ ಕ್ರೀಡಾಕೂಟದಲ್ಲಿ ಟ್ರೋಫಿ ಗೆದ್ದ ಯುವಕರಿಗೆ ಅಭಿನಂದನೆ  Congratulations to the young men who won the trophy at the Dasara sports meet


ಲಕ್ಷ್ಮೇಶ್ವರ, ಸೆ.20: ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್ ಸ್ಪರ್ಧೆಯಲ್ಲಿ ಹುಲ್ಲೂರು ಗ್ರಾಮದ ತಂಡ ಪ್ರಥಮ ಸ್ಥಾನ ಹಾಗೂ ಯಳವತ್ತಿ ಗ್ರಾಮದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.  ವಿಜೇತ ತಂಡಗಳ ಕ್ರೀಡಾಪಟುಗಳಿಗೆ ಯುವಜನ ಹಾಗೂ ಕ್ರೀಡಾ ಇಲಾಖೆಯ ತಾಲ್ಲೂಕು ಮುಖ್ಯಸ್ಥರಾದ ಎಂ.ಡಿ. ತಳಲಿ, ಯಳವತ್ತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌.ಆರ್‌. ಬೀರನವರ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಸಮಿತಿ ಅಧ್ಯಕ್ಷ ಬಸವರಾಜ ಅರ್ಕಸಾಲಿ, ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಮೂಲಿಮನಿ, ಸಹ ಕಾರ್ಯದರ್ಶಿ ಲಿಂಗರಾಜ ಬಾಗೇವಾಡ ಹಾಗೂ ಫಕೀರೇಶ ಮಾಕಡಿ ಸಿದ್ಧಪ್ಪ ಕುರಿ ಸೇರಿದಂತೆ ಗ್ರಾಮದ ಗುರುಹಿರಿಯರು ಬಹುಮಾನ ವಿತರಿಸಿ ಅಭಿನಂದಿಸಿದರು.