ಬಾಲ ಕಾರ್ಮಿಕ ದಾಳಿ : ಮೂವರು ಬಾಲಕರ ರಕ್ಷಣೆ

ವಿಜಯಪುರ ಏ.27 : - ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆಯಲ್ಲಿ ಗುರುವಾರ ಅನೀರೀಕ್ಷಿತವಾಗಿ ಬಾಲಕಾರ್ಮಿಕ ದಾಳಿ ಕೈಗೊಂಡು ಮೂವರು ಬಾಲಕರನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು. 

ದಾಳಿಯಲ್ಲಿ ಕಾರ್ಮಿಕ ಅಧಿಕಾರಿ ಎಸ್‌.ಜಿ. ಖೈನುರ್, 2 ನೆ ವೃತ್ತದ ಕಾರ್ಮಿಕ ನೀರೀಕ್ಷಕರಾದ ಜಗದೇವಿ ಸಜ್ಜನ, ಶಿಕ್ಷಣ ಇಲಾಖೆಯ ಸಿ ಆರ್ ಪಿ ಜೆ.ಎಂ. ಕರಜಗಿ, ಹೆಚ್ಚುವರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾಹೇಬಗೌಡ, ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಕುಮಾರಿ ನೀಲಮ್ಮ ಎಚ್ ಖೆಡಗಿ, ಮಕ್ಕಳ ಸಹಾಯವಾಣಿಯ ಮಂದಾಕಿನಿ ನಾಗಠಾಣ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.