ಸಿಎಂ ಹುರಕಡ್ಲಿ ಫೌಂಡೇಶನ್ ವತಿಯಿಂದ ಅಗ್ನಿವೀರರು, ನಿವೃತ್ತ ಸೈನಿಕರಿಗೆ ಸನ್ಮಾನ

ಸಿಎಂ ಹುರಕಡ್ಲಿ ಫೌಂಡೇಶನ್ ವತಿಯಿಂದ ಅಗ್ನಿವೀರರು, ನಿವೃತ್ತ ಸೈನಿಕರಿಗೆ ಸನ್ಮಾನ CM Hurakadli Foundation felicitates fire fighters and retired soldiers

ಲೋಕದರ್ಶನ ವರದಿ 

 ಮಹಾಲಿಂಗಪುರ 17: ದೇಶ ಸೇವೆಗೆ ಆಯ್ಕೆಯಾಗಿರುವ ಅಗ್ನಿವೀರ ಯುವಕರ ಸಾಧನೆ ಶ್ಲಾಘನೀಯವಾಗಿದ್ದು, ಯುವಕರು ದೇಶಪ್ರೇಮವನ್ನು ಮೈಗೂಡಿಸಿಕೊಂಡು ರಾಷ್ಟ್ರರಕ್ಷಣೆಯಲ್ಲಿ ತೊಡಗುತ್ತಿರುವುದು ಹೆಮ್ಮೆಯ ವಿಷಯ ಎಂದು ಸಮಾಜಸೇವಕ ಚನ್ನಬಸು ಹುರಕಡ್ಲಿ ಹೇಳಿದರು. ಸ್ಥಳೀಯ ಸಿಎಂ ಹುರಕಡ್ಲಿ ಫೌಂಡೇಶನ್ ವತಿಯಿಂದ ಮಹಾಲಿಂಗಪುರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾದ 12 ಯುವಕರನ್ನು ಸನ್ಮಾನಿಸಿ ಅವರು ಮಾತನಾಡಿದರು.