ಉದ್ಯಮಿ ಮೇಲೆ ಗ್ರಾನೈಡ್ ಕಲ್ಲು ಬಿದ್ದು ಸಾವು
Businessman dies after falling granite stone
ಕಾರವಾರ 19: ಮಲ್ಲಿಕಾರ್ಜುನ ಟೈಲ್ಸ್ , ಸಿರಾಮಿಕ್ಸ್ ಅಂಗಡಿ ಮಾಲೀಕ, ಉದ್ಯಮಿ ಮುದ್ದಣ್ಣ ಹನುಮಪ್ಪ ಹಾಲುಂಡಿ (49) ಅವರ ಮೇಲೆ ಗ್ರಾನೈಟ್ ಕಲ್ಲು ಬಿದ್ದು ಸಾವನ್ನಪ್ಪಿದ್ದಾರೆ . ಈ ಘಟನೆ ಗುರುವಾರ ಬೆಳಿಗ್ಗೆ ಸದಾಶಿವಗಡದ ಬಿಡ್ತುಲಬಾಗ ಎಂಬಲ್ಲಿ ಮುದ್ದಣ್ಣ ಅವರ ಟೈಲ್ಸ ಶಾಪ್ ನಲ್ಲಿ ನಡೆದಿದೆ.
ಗ್ರಾನೈಟ್ ಕಲ್ಲಿಗೆ ಅವರು ಕೈಕೊಟ್ಟು ನಿಂತಿದ್ದ ವೇಳೆ , ನೆಲ ಒದ್ದೆಯಾಗಿದ್ದ ಕಾರಣ ಕಲ್ಲು ಜಾರಿ ಅವರ ಮುಖ ಭಾಗಕ್ಕೆ ಬಿತ್ತು ಎನ್ನಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ತರಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು ಎನ್ನಲಾಗಿದೆ.ಕಾರವಾರ ತಾಲೂಕು ಉಪ್ಪಾರ ಸಮುದಾಯದ ಹಿರಿಯ ಮುಖಂಡರು ಹಾಗೂ ಉಪ್ಪಾರ ಸಮಾಜದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು. ಆಕಸ್ಮಿಕ ಸಾವು ಅವರ ಅಪ್ತರಲ್ಲಿ, ಕುಟುಂಬ ವರ್ಗದವರಲ್ಲಿ ಅತೀವ ದುಃಖ ತಂದಿದೆ. ಮುದ್ದಣ್ಣ ಮೂಲತಃ ಬಾಗಲಕೋಟಿ ಜಿಲ್ಲೆಯ ನಿಲೋಗಲ್ಲ ಗ್ರಾಮದವರು. ಟೈಲ್ಸ ಉದ್ಯಮಿಯಾಗಿ ಅವರು ಕಾರವಾರದಲ್ಲಿ ನೆಲಸಿದ್ದರ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 