ಎಸ್ಕಾಂ ಖಾಸಗಿಕರಣ ಗೊಳಿಸಬಾರದೆಂದು ಮನವಿ

ಎಸ್ಕಾಂ ಖಾಸಗಿಕರಣ ಗೊಳಿಸಬಾರದೆಂದು ಮನವಿ Appeal not to privatize Eskom

ಶಿಗ್ಗಾವಿ  18 :  ರಾಜ್ಯದ ಎಸ್ಕಾಂಗಳ ಖಾಸಗಿಕರಣ ಮತ್ತು ಟಾಟಾ ಪವರ ಕಂಪನಿಗೆ ವಿದ್ಯತ್ ವಿತರಣಾ ಪರವಾನಿಗೆಯನ್ನು ನೀಡುತ್ತಿರುವ ಕುರಿತು ನಮ್ಮ ಸಂಘದ ಭಲವಾದ ಆಕ್ಷೇಪಣೆ ಇದ್ದು ಲಕ್ಷಾಂತರ ನೌಕರರು ಗುತ್ತಿಗೆದಾರರು ಖಾಸಗಿಕರಣದಿಂದಾಗಿ ಬೀದಿಗೆ ಬರುವಂತಾಗುತ್ತದೆ ದಯಾಳುಗಳಾದ ತಾವು ರಾಜ್ಯದ ಹಿತದೃಷ್ಟಿಯಿಂದ ಮತ್ತು ಗುತ್ತಿಗೆದಾರರ ಹಿತದೃಷ್ಟಿಯಿಂದ ಎಸ್ಕಾಂಗಳನ್ನು ಖಾಸಗಿಕರಣ ಗೊಳಿಸಬಾರದೆಂದು ತಾಲೂಕ ದಂಡಾಧಿಕಾರಿ ಮೂಲಕ ಸರಕಾರದ ಕೆ.ಇ.ಆರ್‌.ಸಿ ಕಾರ್ಯದರ್ಶಿಗಳು ಬೆಂಗಳೂರು ಇವರಿಗೆ ತಾಲೂಕ ದಂಡಾಧಿಕಾರಿ ಮೂಲಕ ಮನವಿ ಮಾಡಿ ಒತ್ತಾಯಿಸಿದ್ದಾರೆ.    ಈ ಸಂದರ್ಭದಲ್ಲಿ  ಮುಖಂಡ ಮಂಜುನಾಥ ಮಣ್ಣಣ್ಣವರ, ಅಬ್ದುಲ್ ಸಾಬ ಹರಪನಹಳ್ಳಿ, ನಾಗಯ್ಯ ಹಿರೇಮಠ,ಮುದುಕಪ್ಪ ಹೊನ್ನಾಳಿ, ನವೀನ ಸಾಸನೂರ, ಶಿವರಾಜ ಬೂದನೂರ, ಸಿರಾಜ ಮುಲ್ಲಾ,ಬಸವರಾಜ ಶಿವಣ್ಣವರ, ಹಜರತಲಿ ದೊಡ್ಡಮನಿ, ಎಫ್‌.ಜಿ.ಪೂಜಾರ, ಸಿ.ಎಸ್‌.ಅಜ್ಜಣ್ಣನವರ ಉಪಸ್ಥಿತರಿದ್ದರು.