ಅಂಜುಮನ್ ಎ ಇಸ್ಲಾಮೀಯಾ ಕಮೀಟಿಯಿಂದ ಫಯಾಜಗೆ ಗಲ್ಲು ಶಿಕ್ಷೆ ನೀಡಲು ಮನವಿ
ಯರಗಟ್ಟಿ 20: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ನಿರಂಜನ ಹಿರೇಮಠ ಅವರ ಮಗಳ ಹತ್ಯೆ ಖಂಡಿಸಿ ಹರಾಮ್ ಕೋರ್ ಫಯಾಜಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಯರಗಟ್ಟಿಯ ಅಂಜುಮನ್ ಎ ಇಸ್ಲಾಮೀಯಾ ಕಮೀಟಿಯಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಂಜುಮನ್ ಕಮೀಟಿ ಅಧ್ಯಕ್ಷ ಕಾಶೀಮಸಾಬ ಹೊರಟ್ಟಿ ಮಾತನಾಡಿ ಮಗಳನ್ನು ಕಳೆದುಕೊಂಡು, ನೋವಿನಲ್ಲಿರುವ ತಂದೆ-ತಾಯಿಗೆ ಭಗವಂತ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ರಫೀಕ್ ಡಿ.ಕೆ , ಹುಸೇನ್ ದಿಲಾವರನಾಯ್ಕ, ಸಲೀಂ ಜಮಾದಾರ, ಫಿರೋಜ್ ಖಾದ್ರಿ , ಮುಖದರ ನದಾಫ, ನಜೀರ ನದಾಫ, ಫಾರೂಕ ಅತ್ತಾರ, ಜಾವಿದ ಮುಗಟಖಾನ, ಮುಜಫರ್ ಅತ್ತಾರ, ಹಸನ ಅನ್ಸಾರಿ , ಇಸಾಕ ನದಾಫ, ಹಸನ ಹುಸೇನನಾಯ್ಕರ, ಇನ್ನುಳಿದ ಅಂಜುಮನಿ ಇಸ್ಲಾಮಿ ಹಾಗೂ ಸಮಾಜದ ಮುಖಂಡರು ಇದ್ದರು.