ದಾಂಪತ್ಯಕ್ಕೆ ಕಾಲಿಟ್ಟ ವಿಶೇಷ ಜೋಡಿ

ಹೂವಿನಹಡಗಲಿ 28: ತಾಲೂಕಿನ ಬಿತ್ಯಾನತಾಂಡಾದಲ್ಲಿ ಮಾತಬಾರದ ಮತ್ತು ಕಿವಿ ಕೇಳಿಸದ ವಿಶೇಷ ಜೋಡಿ ದಾಂಪತ್ಯಕ್ಕೆ ಕಾಲಿಟ್ಟರು. ನಿರ್ಮಲಾ (ಭಾರ್ಗವಿ) ಮತ್ತು ಮುಂಡರಗಿ ತಾಲ್ಲೂಕು ಸೇವಾನಗರದ ಲಕ್ಕವ್ವ ಶಂಕ್ರ​‍್ಪ ಲಮಾಣಿ ಅವರ ಪುತ್ರ ಧನಸಿಂಗ್ ನಾಯ್ಕರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿರ್ಮಲ ಮೈಸೂರು ಜೆಎಸ್‌ಎಸ್ ಡಿಪ್ಲೊಮಾ ಪಾಲಿಟೆಕ್ನಿಕ್‌ನಲಿ,್ಲ ಧನಸಿಂಗ್ ನಾಯ್ಕರ ಮೈಸೂರು ತಾಲ್ಲೂಕು ಕಡಕೋಳದ ಟಿವಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಧನಸಿಂಗ್ ನಾಯ್ಕ- ನಿರ್ಮಲಾ ಮಾತುಬಾರದ, ಮೂಕರಾಗಿದ್ದರೂ ಪ್ರತಿಭಾವಂತರು. ಅಂಗವೈಕಲ್ಯ ಮೀರಿ ಇಬ್ಬರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದರು. ಆ ದೇವರೇ ಅವರನ್ನು ವಿವಾಹ ಬಂಧನಕ್ಕೆ ಒಳಪಡಿಸಿದ್ದಾನೆ’ ಎಂದು ಭೀಮಾನಾಯ್ಕ ಹೇಳಿದರು.