ವೀರಯೋಧನಿಗೆ ಹಡಗಲಿಯಲ್ಲಿ ಭವ್ಯ ಸ್ವಾಗತ

ಹೂವಿನಹಡಗಲಿ 02: ಭಾರತ ದೇಶದ ನಾನಾ ಗಡಿಭಾಗಗಳಲ್ಲಿ ಸುದೀರ್ಘ 21ವರ್ಷ ಕೇಂದ್ರಿಯ ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸಿ ಆಗಮಿಸಿದ ಜಗದೀಶ್ ಬೆಳಸಿ ಎಂಬ ವೀರಯೋಧನಿಗೆ ಮಂಗಳವಾರ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಸ್ವಾಗತಿಸಲಾಯಿತು. ನಂತರ ತೆರೆದ ವಾಹನದಲ್ಲಿ ಶಾಸ್ತ್ರಿ ವೃತ್ತದ ಮೂಲಕ ಪಟ್ಟಣದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಶಾಸಕ ಕೃಷ್ಣನಾಯ್ಕ ವೀರಯೋಧನಿಗೆ ಹೂವಿನಹಾರ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತಿಸಲಾಯಿತು.  ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ. ನಾನಾ ಪಕ್ಷದ ಮುಖಂಡರು ಇದ್ದರು.