ಶೇಡಬಾಳದಲ್ಲಿ ವಿಜೃಂಭಣೆಯಿಂದ 77 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಶೇಡಬಾಳ 16- ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.  

ಇಲ್ಲಿನ ಬಸವಣ್ಣ ಅಗಸಿಯಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಶಿವಾಜಿ ಜಾಧವ ಅವರು ಗಾಂಧೀಜಿ ಹಾಗೂ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹಿರಿಯ ಪತ್ರಕರ್ತ ಕುಮಾರ ಪಾಟೀಲ ಧ್ವಜಾರೋಹಣ ನೆರವೇರಿಸಿದರು.  

ಇಲ್ಲಿನ ಶಾಂತಿಸಾಗರ ಮರಾಠಿ ವಿದ್ಯಾಮಂದಿರದ ವಿದ್ಯಾರ್ಥಿಗಳು ಧ್ವಜ ವಂದನೆ ಸಲ್ಲಿಸಿ ರಾಷ್ಟ್ರಗೀತೆ ಹಾಡಿದರು. ಮಕ್ಕಳಿಗೆ ಸಿಹಿ ಹಂಚಲಾಯಿತು. 

ಈ ಸಮಯದಲ್ಲಿ ಶಿಕ್ಷಕರಾದ ಕಿರಣ ಕಾಂಬಳೆ, ಹೊನಮಾನೆ ಸರ್, ಬೋಸಲೆ ಸರ್, ಸಾರಿಕಾ ಸಿಂಧೆ, ಆಶಾ ಸಿಂಧೆ, ಬಂಡು ಸಿಂಧೆ, ಬಾಳಾಸಾಬ ಕಳಸಕರ, ಕುಮಾರ ಪವಾರ, ವಸಂತ ಸಿಂಧೆ, ಸಂಭಾಜಿ ನಿಕ್ಕಂ, ರಾಜು ಸಿಂಧೆ, ಪ್ರಕಾಶ ನಿಕ್ಕಂ, ಪೋಪಟ ಪವಾರ, ಪೋಪಟ ಭುಜಗೌಡರ, ರಾವಸಾಬ ಪಾಯಪ್ರಪ ಸೇರಿದಂತೆ ಅನೇಕರು ಇದ್ದರು.