ಸಾಗರದಾಚೆಗೂ ಬಸವಧರ್ಮವನ್ನು ವಿಸ್ತರಿಸಿದ್ದು ನಾಡಿನ ಹೆಮ್ಮೆ: ಡಾ.ಪ್ರಭಾಕರ ಕೋರೆ
47th Veerashaiva Basava Sangam Convention in Detroit, North America
ಉತ್ತರ ಅಮೇರಿಕಾದ ಡೆಟ್ರ್ಯಾಟ್ದಲ್ಲಿ 47ನೇ ವೀರಶೈವ ಬಸವ ಸಂಗಮ ಸಮಾವೇಶ
ಬೆಳಗಾವಿ 07: ಭಾರತದಿಂದ ಸಾವಿರಾರು ಮೈಲು ದೂರವಿರುವ ನೀವೆಲ್ಲರೂ ಬಸವ ಧರ್ಮವನ್ನು ಸಾಗರದಾಚೆಗೂ ಜೀವಂತಗೊಳಿಸಿದ್ದೀರಿ. ನಿಮ್ಮೆಲ್ಲರ ಬಸವಾಭಿಮಾನಕ್ಕೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರೂ ಕಡಿಮೆ. ಬಸವಣ್ಣನವರು ವಿಶ್ವಸಂದೇಶವನ್ನು ನೀಡಿದ ಮಹಾಮಾನವತಾವಾದಿ ಅವರು ವಿಶ್ವವಿಭೂತಿಪುರುಷರು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಹೇಳಿದರು. ಅವರು
ಉತ್ತರ ಅಮೇರಿಕಾದ ಡೆಟ್ರ್ಯಾಟ್ ನಗರದಲ್ಲಿ ಜುಲೈ 4 ರಿಂದ 6ರವರೆಗೆ ವೀರಶೈವ ಸಮಾಜ ಆಯೋಜಿಸಿದ 47ನೇ (ವಿಎಸ್ಎನ್ಎ) ಶರಣ ಸಂಗಮ ಸಮಾವೇಶ, ಬಸವ ಜಯಂತಿ ಸಮಾರಂಭ ಹಾಗೂ ಬಸವ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತದಾಚೆಗೆ ಬಸವಣ್ಣನವರ ಜೀವನ ಸಂದೇಶವನ್ನು ಜೀವಂತವಾಗಿಡುವ ಮಹತ್ತರ ಕೆಲಸವನ್ನು ಉತ್ತರ ಅಮೆರಿಕೆಯ ವೀರಶೈವ ಸಮಾಜವು ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಕಾರ್ಯ. ಬಸವಾದಿ ಶರಣರು ಸ್ಥಾಪಿಸಿದ ವೀರಶೈವ ಲಿಂಗಾಯತ ಧರ್ಮದ ನಿಜವಾದ ವಾರಸುದಾರರು ನೀವು. ಶರಣರ ವಿಚಾರಗಳು ಎಷ್ಟು ಪ್ರಖರವಾಗಿವೆ ಎಂದರೆ ಅವು ಸಾವಿರಾರು ವರ್ಷಗಳಾದರೂ ಈ ಭೂಮಿಯಿಂದ ಅಳಿಯಲು ಸಾಧ್ಯವಿಲ್ಲ. ವಿಶ್ವಕ್ಕೆ ಬಹುದೊಡ್ಡ ಕೊಡುಗೆ ಬಸವಾದಿ ಶಿವ ಶರಣರ ವಚನಗಳು. ಶರಣರು ಕೇವಲ ಧರ್ಮ ಸ್ಥಾಪಕರಲ್ಲ. ಮಾನವ ಧರ್ಮ ಸ್ಥಾಪಕರು. ಸಮಾಜದಲ್ಲಿದ್ದ ಅಜ್ಞಾನವನ್ನು ಕಿತ್ತು ಹಾಕಿದವರು. ಸಮಾಜದಲ್ಲಿ ಸಮ ಸಮಾಜವನ್ನು ಉಂಟು ಮಾಡಿದ ಹರಿಕಾರರು. ಅಂತಹ ಶರಣರು ಕಾಯಕ ದಾಸೋಹ, ಸಮಾನತೆಯ ವಿಚಾರಗಳನ್ನು ಇಂದು ಜಗತ್ತು ಸ್ವೀಕರಿಸಿಕೊಳ್ಳುತ್ತಿರುವುದು ಸಂತೋಷ. ಕಳೆದ ನಾಲ್ವತ್ತೇಳು ವರ್ಷಗಳಿಂದ ಈ ಸಂಘಟನೆಯು ಬಸವಧರ್ಮವನ್ನು ಅಮೆರಿಕೆಯಲ್ಲಿ ಉಳಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿಮಾನವೆನಿಸುತ್ತಿದೆ. ಈ 47ನೇ ಸಮಾವೇಶದ ಮೂಲಕ ದೊಡ್ಡ ಚರಿತ್ರೆಯನ್ನು ನಿರ್ಮಿಸಿದ್ದೀರಿ. ನಿಮ್ಮ ಸೇವೆಗೆ ಪದಗಳು ಇಲ್ಲ. ಈ ಸೇವೆ ಅಮೇರಿಕೆಯಲ್ಲಿ ಸದಾ ಮುಂದುವರೆಯಲಿ ಎಂದು ಡಾ.ಕೋರೆಯವರು ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪ್ರವಚನಕಾರ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೂಜ್ಯ ವಚನಾನಂದ ಮಹಾಸ್ವಾಮಿಗಳು ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿಯ ಸಂಸದರಾದ ಜಗದೀಶ ಶೆಟ್ಟರ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯರುಗಳಾದ ಪ್ರದೀಪ್, ಕೆ.ಎಸ್.ನವೀನ್, ಉದ್ಯಮಿ ರವಿಶಂಕರ ಭೂಪಳಾಪುರ, ಉತ್ತರ ಅಮೆರಿಕೆ ವೀರಶೈವ ಸಮಾಜದ ಅಧ್ಯಕ್ಷರಾದ ದಯಾನಂದ, ಸಮಾವೇಶದ ಕಾರ್ಯಾಧ್ಯಕ್ಷರಾದ ಮಹೇಶ ಪಾಟೀಲ, ಶೈಲಾ ಬೆಟ್ಟಲೂರ, ಪ್ರಭು ದೇಸಾಯಿಯವರೆ, ಗುರುರಾಜ ಕೋಟಿ ಹಾಗೂ ಸಾವಿರಾರು ವೀರಶೈವ ಲಿಂಗಾಯತ ಸದ್ಭಕ್ತರು ಭಾಗವಹಿಸಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 