ಬಸವೇಶ್ವರ ಅರ್ಬನ್ ಸೊಸಾಯಿಟಿಗೆ 4.58 ಕೋಟಿ ರೂ ಲಾಭ

ಮೂಡಲಗಿ 26: ಬಸವೇಶ್ವರ ಅರ್ಬನ್ ಸೊಸಾಯಿಟಿಯು  ಕಳೆದ ಮಾರ್ಚ ಅಂತ್ಯಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದವರು ಪ್ರಾಮಾಣಿಕ ಸೇವೆ ಹಾಗೂ ಗ್ರಾಹಕ ಸಹಕಾರದಿಂದ 4.58 ಕೋಟಿ ರೂ ಲಾಭವನ್ನು ಗಳಿಸಿ ಪ್ರಗತಿ ಪಥದತ್ತ ಮುನ್ನೆಡಯುತ್ತಲಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ಮಲ್ಲು ಢವಳೇಶ್ವರ  ತಿಳಿಸಿದರು. 

ಅವರು ಪಟ್ಟಣದಲ್ಲಿ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾ ಭವನದಲ್ಲಿ ಸೊಸಾಯಿಟಿ 2023-24ನೇ ಸಾಲೀನ ಪ್ರಗತಿ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೊಸಾಯಿಟಿಯು 10800 ಶೇರುದಾರಿಂದ 6.07 ಕೋಟಿ ರೂ  ಶೇರು ಬಂಡವಾಳ ಹೊಂದಿ, 207.85 ಕೋಟಿ ರೂ ಠೇವು ಸಂಗ್ರಹಿಸಿ 20 ಕೋಟಿ ರೂ ಕಾಯ್ದಿಟ್ಟ ನಿಧಿಗಳನ್ನು ಹೊಂದಿ ಠೇವುದಾರ ಭದ್ರತೆಗಾಗಿ 61.31 ಕೋಟಿ ರೂ ಗುಂತಾವಣಿಗಳನ್ನು ಮಾಡಿ ಮಾರ್ಚ ಅಂತ್ಯಕ್ಕೆ ಒಟ್ಟು 244.82 ಕೋಟಿ  ರೂ ದುಡಿಯುವ ಬಂಡವಾಳ ಹೊಂದಿ ರೈತಾಪಿ ವರ್ಗ, ವ್ಯಾಪಾರಸ್ಥರಿಗೆ ಸೇರಿದಂತೆ ವಿವಿಧ ತೇರನಾದ 158.37 ಕೋಟಿ  ರೂ ಸಾಲ ವಿತರಿಸಿ  4.58 ಕೋಟಿ ರೂ ಲಾಭ ಹೊಂದಿದೆ ಎಂದರು.  

ಸೊಸಾಯಿಟಿಯು ಈಗಾಗಲೆ ಹದಿನೈದು ಶಾಖೆಗಳನ್ನು ಹೊಂದಿ ಎಲ್ಲ ಶಾಖೆಗಳು ಪ್ರಗತಿಯಲ್ಲಿದ್ದು ಮುಂಬರುವ ದಿನಗಳ ಇನ್ನೂ ಐದು ಶಾಖೆಗಳ ಆರಂಭಿಸುವ ಮತ್ತು ಶಾಖೆಗಳ ಸ್ವಂತ ಕಟ್ಟಡ ಹೊಂದಲು ನಿವೇಶ ಖರೀದಿಸುವ ಗುರಿ ಹೊಂದಲಾಗಿದೆ ಎಂದರು.  

ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಮಾತನಾಡಿ, ಸೊಸಾಯಿಟಿಯ ಗ್ರಾಹಕರು ಸಕಾಲಕ್ಕೆ  ವ್ಯವಹಾರ ನಡೆಸಿದರಿಂದ ಶ್ರೀ ಬಸವೇಶ್ವರ ಸೊಸಾಯಿಟಿಯು ಶೇರುದಾರಿರಿಗೆ ಶೇ.15 ಲಾಭಾವಂಶ ವಿತರಿಸಿ ಪ್ರಗತಿ ಪತಥದತ್ತ ಸಾಗುತ್ತಿವೆ ಎಂದರು 

ಪತ್ರಿಕಾಗೋಷ್ಠಿಯಲ್ಲಿ ಸೊಸಾಯಿಟಿಯ ಉಪಾಧ್ಯಕ್ಷ ರವೀಂದ್ರ ಬಾಗೋಜಿ, ನಿರ್ದೇಶಕರಾದ ಬಸವರಾಜ ಮ. ತೇಲಿ,  ಗೀರೀಶ ಸು.ಢವಳೇಶ್ವರ,  ಚನ್ನಬಸು ಭೀ. ಬಡ್ಡಿ, ಶ್ರೀಕಾಂತ ಶಿ.ಹಿರೇಮಠ, ಶ್ರೀಶೈಲ ಯ.ಮದಗಣ್ಣವರ,  ದೇವಪ್ಪ ಫ.ಕೌಜಲಗಿ, ಕುಸುಮಾ ಆ.ತೇಲಿ, ಸುಮಿತ್ರಾ ಪ್ರ.ಶೇಡಬಾಳ, ಮಹಾದೇವಿ ಶಂ.ಹಿರೇಮಠ, ಲಕ್ಷ್ಮಣ ಬ.ತೇಳಗಡೆ, ರಾಘವೇಂದ್ರ ಸಿ.ಕೆಸಪನಟ್ಟಿ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಇದ್ದರು.