ಮಳೆ , ಪ್ರವಾಹದಿಂದ ಆಹಾರ ಉತ್ಪಾದನೆಯಲ್ಲಿ ಶೇಕಡ 25-30 ರಷ್ಟು ಕುಸಿತ
ಬೆಂಗಳೂರು ನ, 12 : ಕಳೆದ ವರ್ಷದ ಬರಗಾಲ ರಾಜ್ಯದ ರೈತರಿಗೆ ಸಾಕಷ್ಟು ನಷ್ಟ ಉಂಟು ಮಾಡಿದ್ದರೆ ಈ ವರ್ಷ , ಭಾರಿ ಮಳೆ , ಪ್ರವಾಹದಿಂದ ಆಹಾರ ಉತ್ಪಾದನೆಯಲ್ಲಿ ಶೇಕಡಾ 25-30ರಷ್ಟು ಕುಸಿತ ಉಂಟಾಗಲಿದೆ. ರಾಜ್ಯದ ಅನೇಕ ಭಾಗಗಳಲ್ಲಿ ವ್ಯಾಪಕ ಪ್ರವಾಹದಿಂದಾಗಿ ಹಿಂಗಾರು ಹಂಗಾಮಿನಲ್ಲಿ ಭಾರಿ ನಷ್ಟವಾಗಿರುವುದರಿಂದ ಆಹಾರ ಉತ್ಪಾದನೆಯಲ್ಲಿ ಕುಸಿತ ವಾಗಲಿದೆ ಎಂದು ಕೃಷಿ ಅಧಿಕಾರಿಗಳು ಆತಂಕ ತೋಡಿಕೊಂಡಿದ್ದಾರೆ. ಆಹಾರ ಧಾನ್ಯಗಳ ಜೊತೆಗೆ ಬೇಳೆಕಾಳುಗಳ ಉತ್ಪಾದನೆಯಲ್ಲೂ ಶೇಕಡಾ 25-30ರಷ್ಟು ಕುಸಿತ ಕಾಣಲಿದೆ. ಕೃಷಿ ಇಲಾಖೆ ಮೂಲಗಳ ಪ್ರಕಾರ, ರಾಜ್ಯವು 2019 ಕ್ಕೆ 110 ಲಕ್ಷ ಟನ್ ಆಹಾರ ಉತ್ಪಾದನೆ ಗುರಿ ನಿಗದಿಪಡಿಸಿದ್ದರೂ , ಪ್ರತಿಕೂಲ ಪರಿಸ್ಥಿತಿಯ ಕಾರಣ ಈಗ ಕೇವಲ 80-85 ಲಕ್ಷ ಟನ್ ಮಾತ್ರ ಉತ್ಪಾದನೆ ಆಗಬಹುದು ಎಂದೂ ಹೇಳಲಾಗಿದೆ. ಇದರ ಜೊತೆಗೆ 75 ಲಕ್ಷ ಹೆಕ್ಟೇರ್ ತೋಟದ ಬೆಳೆಯ ಪೈಕಿ ಮಳೆಯ ಕಾರಣ 7.5 ಲಕ್ಷ ಹೆಕ್ಟೇರ್ ಬೆಳೆ ಮಳೆ, ಪ್ರವಾಹದಿಂದ ಹಾಳಾಗಿದೆ. ಕೃಷಿ ಇಲಾಖೆಯ ವರದಿಗಳ ಪ್ರಕಾರ,ಇಲ್ಲಿಯವರೆಗೆ 33 ಲಕ್ಷ ಹೆಕ್ಟೇರ್ ಹಿಂಗಾರು ಬೆಳೆ ಬಿತ್ತನೆಯಾಗಬೇಕಿತ್ತು ತು ಆದರೆ ಈಗ ಕೇವಲ 12 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 