ಸಿದ್ಧಗಂಗಾ ಶ್ರಿಗಳ 2023ರ ದಿನಚರಿ ಬಿಡುಗಡೆ

ವಿಜಯನಗರ 22: ಸಿದ್ದಗಂಗಾ ಕ್ಷೇತ್ರದ ಕೀರ್ತಿಯನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಪದ್ಮಭೂಷಣ, ಕರ್ನಾಟಕ ರತ್ನ, ಡಾ. ಶಿವಕುಮಾರ ಮಹಾಸ್ವಾಮಿಗಳವರ 2023ರ ದಿನಚರಿ ಕಿರು ಪುಸ್ತಕವನ್ನು ವಿಜಯನಗರ ಕರುನಾಡ ರಕ್ಷಣಾ ವೇದಿಕೆಯ ಕಛೇರಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿಯವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರು ಹಾಗೂ ವೇದಿಕೆಯ ಮುಖ್ಯ ಅತಿಥಿಗಳಾದ ಕಟ್ಟೆಮನೆ ಶಿವರಾಮಪ್ಪ, ಶ್ರೀಮಠದ ಬಸವರಾಜ ಸ್ವಾಮಿ, ಜಿಲ್ಲಾಧ್ಯಕ್ಷರಾದ ಹಗರಿ ಬಸವರಾಜ, ಜಿಲ್ಲಾ ಕಾರ್ಯಾಧ್ಯಕ್ಷರಾದ ತಳವಾರ ಮಂಜುನಾಥ ನಾಯಕ್, ರಾಜ್ಯ ಮುಖಂಡರಾದ ಬಾಲೇಂದ್ರ, ಜಿಲ್ಲಾ ಕಾರ್ಯದರ್ಶಿ ದೇವೇಂದ್ರಗೌಡ, ಶ್ರೀರಾಮುಲು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇವರುಗಳು ಇದ್ದರು.