ಸ್ವರಾಂಜಲಿ ವಿಶೇಷ ಭಾವಸಂಗೀತ ಕಾರ್ಯಕ್ರಮ
Swaranjali is a special emotional program
ಸ್ವರಾಂಜಲಿ ವಿಶೇಷ ಭಾವಸಂಗೀತ ಕಾರ್ಯಕ್ರಮ
ಬೆಳಗಾವಿ 15: ಶಹಾಪುರದ ಪ್ರಸಿದ್ಧ ಸರಸ್ವತಿ ವಾಚನಾಲಯದ 150ನೇ ಶತಕೋತ್ತರ್ ಸುವರ್ಣ ಮಹೋತ್ಸವ ವರ್ಷನಿಮಿತ್ತ ಪ್ರಸಿದ್ಧ ಗಾಯಕ ವಿನಾಯಕ ಮೋರೆ ಹಾಗೂ ಗಾಯಕಿ ಅಕ್ಷತಾ ಮೋರೆ ಅವರಿಂದ "ಸ್ವರಾಂಜಲಿ" ವಿಶೇಷ ಭಾವಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅವರು ಅನೇಕ ಸುಮಧುರ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮನಗೆದ್ದರು. ಅವರಿಗೆ ಸಿಂಥಸೈಜರ್ನಲ್ಲಿ ಸುನೀಲ ಗುರವ, ತಬಲಾ ಸಂತೋಷ್ ಪುರಿ ಮತ್ತು ಆಕ್ಟೋಪಾಡ್ನಲ್ಲಿ ಸ್ನೇಹಲ್ ಜಾಧವ ಅವರು ಅತ್ಯುತ್ತಮ ಸಂಗೀತಸಾಥ ಮಾಡಿದರು.
ಸರಸ್ವತಿ ವಾಚನಾಲಯದ ಅಧ್ಯಕ್ಷೆ ಸ್ವರೂಪಾ ಇನಾಮದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಕಲಾವಿದರನ್ನು ಪರಿಚಯಿಸಿದರು. ಗಣ್ಯರಿಂದ ದೀಪ ಬೆಳಗಿಸಲಾಯಿತು. ಕಾರ್ಯಾಧ್ಯಕ್ಷ ಸುಹಾಸ ಸಾಂಗ್ಲಿಕರ ಅವರು ವಿನಾಯಕ ಮೋರೆ ಮತ್ತು ಅಕ್ಷತಾ ಮೋರೆ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಶ್ರೋತೃಗಳು ಪಾಲ್ಗೊಂಡಿದ್ದರು.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 