ಸಿದ್ದೇಶ್ವರ ಸ್ವಾಮಿಯ ತೇರು ಗಾಲಿಗೆ ವಿಶೇಷ ಪೂಜೆ
Special worship to the chariot of Siddheshwara Swamy
ಹೂವಿನಹಡಗಲಿ 19: ತಾಲೂಕಿನ ಹೊಳಗುಂದಿ ಸುಕ್ಷೇತ್ರ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ನಿಮಿತ್ತ ಅಮವಾಸ್ಯೆ ದಿನ ಶುಕ್ರವಾರ ಬೆಳಿಗ್ಗೆ 9ಗಂಟೆಗೆ ತೇರು ಗಾಲಿ ಹೊರಕ್ಕೆ ಹಾಕಲಾಯಿತು. ಅಳವಂಡಿ ಹಿರೇಮಠ ದ ಮರಳಾರಾದ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ದೇವಸ್ಥಾನ ಸಮಿತಿ ಯಿಂದ ತೇರು ಗಡ್ಡಿಗೆ ವಿಶೇಷ ಪೂಜೆ ನಂತರ ವಾದ್ಯ ಮೇಳದೊಂದಿಗೆ ತೇರುಗಾಲಿ ಹೊರಕ್ಕೆ ಹಾಕಲಾಯಿತು.ಅಮವಾಸ್ಯೆ ನಿಮಿತ್ತ ಸಿದ್ದೇಶ್ವರ ಸ್ವಾಮಿಗೆ ಅಭಿಷೇಕ್, ಬಿಲ್ವಾರ್ಚನೆ, ಮಂಗಳಾರತಿ ಪೂಜೆ ನೆರವೇರಿತು.ಹೊಸ ವರುಷದಲ್ಲಿ ಜ.2ರಂದು ಸಿದ್ದೇಶ್ವರ ಸ್ವಾಮಿಯ ರಥೋತ್ಸವ, 3ರಂದು ಅಗ್ನಿ ಕಾರ್ಯ ಕ್ರಮ ಜರುಗಲಿದೆ ಜತೆಗೆ ಈಬಾರಿ ದೇಗುಲ ಜೀರ್ಣೋದ್ಧಾರ ನಡೆಯುತ್ತಿರುವದರಿಂದ ಹೆಚ್ಚಿನ ಭಕ್ತಾಧಿಗಳು ದೇಣಿಗೆ ನೀಡಬೇಕೆಂದು ದೇಗುಲ ಸಮಿತಿ ಕೋರಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 