ಜೋಳ ಖರೀದಿಯ 78 ಕೋಟಿ ರೂ ಬಾಕಿ ಹಣ ಬಿಡುಗಡೆಗೆ ಮನವಿ
Request for release of Rs 78 crore outstanding for purchase of corn
ಜೋಳ ಖರೀದಿಯ 78 ಕೋಟಿ ರೂ ಬಾಕಿ ಹಣ ಬಿಡುಗಡೆಗೆ ಮನವಿ
ಬಳ್ಳಾರಿ 09 :ರಂದುಜಿಲ್ಲೆಯ ರೈತರಿಗೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿದ 78 ಕೋಟಿರೂ ಹಣವನ್ನುತಕ್ಷಣ ಬಿಡುಗಡೆಗೆಕ್ರಮ ಕೈಗೊಳ್ಳಬೇಕೆಂದು ತುಂಗಭದ್ರರೈತ ಸಂಘ ಗ್ರಾಮೀಣ ಶಾಸಕ ಬಿ.ನಾಗೇಂದ್ರಅವರಲ್ಲಿಇಂದು ಮನವಿ ಮಾಡಿದೆ.ಶಾಸಕರಕಚೇರಿಯಲ್ಲಿ ಮನವಿ ಸಲ್ಲಿಸಿದ ಸಂಘದಅಧ್ಯಕ್ಷದರೂರು ಪುರುಷೋತ್ತಮಗೌಡ,ಬೇಸಿಗೆ ಸಮಯದಲ್ಲಿ ಸರ್ಕಾರವುರೈತರಿಂದ ಬೆಂಬಲ ಬೆಲೆಯಲ್ಲಿಜಿಲ್ಲೆಯ 12 ಖರೀದಿ ಕೇಂದ್ರಗಳನ್ನು ತೆಗೆದು ರೂ.3,371 ನಂತೆ ಹೈಬ್ರಿಡ್ ಜೋಳವನ್ನು ಹಾಗೂ ರೂ.3421 ನಂತೆಬಿಳಿಜೋಳವನ್ನು 3739 ರೈತರಿಂದಖರೀದಿಸಲಾಗಿದೆ. ಖರೀದಯ ಮೊತ್ತವು 78 ಕೋಟಿ ರೂಪಾಯಿಗಳಾಗಿದ್ದು.ಇದುವರೆಗೂ ಸರ್ಕಾರವುರೈತರಿಗೆ ಹಣ ಪಾವತಿ ಮಾಡಿಲ್ಲ.ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದೆ.ಮತ್ತುತುಂಗಭದ್ರಜಲಾಶಯದಿಂದ ಕಾಲುವೆಗಳಿಗೆ ನೀರು ಬಿಟ್ಟುಒಂದು ತಿಂಗಳಾಗಿದೆ.ಇದರಿಂದಾಗಿರೈತರಿರು ಬೀಜ, ರಸಗೊಬ್ಬರಖರೀದಿಗೆ ಹಣಕಾಸಿನ ತೊಂದರೆಯಾಗಿಆರ್ಥಿಕ ಸಂಕಷ್ಟದಲ್ಲಿದ್ದಾರೆ.ಈ ವಿಷಯವನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದುತಕ್ಷಣ ಬಳ್ಳಾರಿ ಜಿಲ್ಲೆಯ ಜೋಳ ಮಾರಾಟಮಾಡಿರುವರೈತರಿಗೆ 78 ಕೋಟಿ ರೂಪಾಯಿಗಳ ಹಣಕಾಸು ಪಾವತಿಸಲುಕ್ರಮಕ್ಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 