ಪ್ರಾಕೃತ ಪರೀಕ್ಷೆ: ಮಾಣಿಕ ಕಲಮನಿಗೆ ಸುವರ್ಣ ಪದಕ
Prakrit exam: Manik Kalam wins gold medal
ಪ್ರಾಕೃತ ಪರೀಕ್ಷೆ: ಮಾಣಿಕ ಕಲಮನಿಗೆ ಸುವರ್ಣ ಪದಕ
ಬೆಳಗಾವಿ 12: ಶ್ರೀಕ್ಷೇತ್ರ ಶ್ರವಣಬೆಳಗೊಳದ ಪ್ರಾಕೃತ ವಿದ್ಯಾಪೀಠ ಸಂಚಾಲಿತ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ನಡೆಸಲಾಗುವ ಪರೀಕ್ಷೆಯಲ್ಲಿ ಪ್ರಾಕೃತ ರತ್ನ ಕನ್ನಡ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಬೆಳಗಾವಿಯ ಮಾಣಿಕ ಕುಂತಿನಾಥ ಕಲಮನಿ ಇವರು ಅತೀ ಹೆಚ್ಚು ಅಂಕ ಪಡೆಯುವ ಮೂಲಕ ಸುವರ್ಣ ಪದಕ ಪಡೆದುಕೊಂಡಿದ್ದಾರೆ.
ಪ್ರಾಕೃತ ವಿದ್ಯಾಪೀಠದ ವತಿಯಿಂದ ಕನ್ನಡ ಮತ್ತು ಹಿಂದೆ ಭಾಷೆಯಲ್ಲಿ ಪ್ರಾಕೃತ ಡಿಪ್ಲೋಮಾ, ಪ್ರಾಕೃತ ಪ್ರವೇಶ, ಪ್ರಾಕೃತ ಪಥಮ, ಪ್ರಾಕೃತ ಮಧ್ಯಮ, ಪ್ರಾಕೃತ ವಿಶಾರದ ಹಾಗೂ ಅಂತಿಮವಾಗಿ ಪ್ರಾಕೃತ ರತ್ನ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ 2025 ರಂದು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಪ್ರಾಕೃತ ರತ್ನ ವಿಭಾಗದಲ್ಲಿ ಮಾಣಿಕ ಇವರು ಸುವರ್ಣ ಪದಕ ಪಡೆದುಕೊಂಡಿದ್ದಾರೆ. ಈ ಮೊದಲು ಇವರು ಪ್ರಾಕೃತ ಮದ್ಯಮ ಪರೀಕ್ಷೆ ಹಾಗೂ ಪ್ರಾಕೃತ ವಿಶಾರದ ಪರೀಕ್ಷೆಯಲ್ಲಿ ಸುವರ್ಣ ಪದಕ ಪಡೆದುಕೊಂಡಿದ್ದು, ಇದೀಗ ಪ್ರಾಕೃತ ರತ್ನ ವಿಭಾಗದಲ್ಲಿ ಸುವರ್ಣ ಪದಕ ಪಡೆಯುವ ಮೂಕ ಹ್ಯಾಟ್ರಿಕ್ ದಾಖಲೆ ಸಾಧಿಸಿದ್ದಾರೆ.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 