ಮುತ್ತಗಿ: ಬೀರೇಶ್ವರ ಜಾತ್ರಾ ಮಹೋತ್ಸವ
ಲೋಕದರ್ಶನವರದಿ
ಮುತ್ತಗಿ೨೦ : ಕಲಘಟಗಿ ಬೀರೇಶ್ವರರು ಕನಕಭವನ ಬೀರ ಲಿಂಗೇಶ್ವರರು ಸಾಕ್ಷಾತ ಶಿವನ ಅವತಾರಿ ಮಂಗಲಕಾರಿಯಾದವರು ಯಾವುದೇ ಶುಭ ಕಾರ್ಯಕ್ಕೆ ಕಂಬಳಿ, ಭಂಡಾರ, ಡೊಳ್ಳು ಅತ್ಯಂತ ಅವಶ್ಯಕ ಪವಿತ್ರ ಆಭರಣಗಳಾಗಿದೆ.
ಶಿವನ ಅಲಂಕಾರದ ಪವಿತ್ರ ಆಭರಣಗಳೆ ಬೀರಲಿಂಗೇಶ್ವರನ ಪರಮ ಆಸ್ತಿಗಳಾಗಿವೆ. ಕಂಬಳಿ ಬೀಸಿದರೆ ಮಳೆ ತರೆಸಿದ್ದು ಭಂಡಾರ ಧರೆಸಿದರೆ ಬದುಕು ಬಂಗಾರವಾಗುವುದು.ಡೊಳ್ಳು ಬಾರಿಸಿದರೆ ಸಾಕ್ಷಾತ ಶಿವನೆ ಪ್ರತ್ಯೇಕ್ಷನಾಗುವನು ಎಂಬ ಅಪಾರ ನಂಬಿಕೆ ಇಟ್ಟವರು ಹಾಲುಮತ ಕುರುಬರು ಎಂದು ಮನಸೂರು ರೇವಣಸಿದ್ಧೇಶ್ವರ ಮಹಾಮಠದ ಪೀಠಾಧಿಪತಿ ಬಸವರಾಜ ದೇವರು ಇಂದಿಲ್ಲಿ ನುಡಿದರು. ಮತ್ತುಗಿ ಗ್ರಾಮದಲ್ಲಿದ್ದು ಬೀರೇಶ್ವರ ಜಾತ್ರಾ ಮಹೋತ್ಸವ 2019 ಡೊಳ್ಳು ಬಾರಿಸಿ, ಕಂಬಳಿ ಬೀಸಿ, ಚಾಲನೆ ನೀಡಿದ ಶ್ರೀಗಳು ಮಳೆ ಬೆಳೆ ಶಾಂತಿ ಸೌಕ್ಯಕ್ಕಾಗಿ ಜಾತ್ರೆಗಳು ಅತ್ಯಂತ ಅಗತ್ಯವೆಂದು ಹೇಳಿದರು.
ಬೆಳ್ಳಿಗ್ಗೆ ಅಮೃತ ಮಹೋತ್ಸವದಲ್ಲಿ ಬೀರಲಿಂಗೇಶ್ವರನಿಗೆ ಅಭಿಶೇಕ, ಪೂಜೆ, ಮಹಾ ಮಂಗನ ಪ್ರಸಾದ ವಿತರಣೆ ಜರುಗಿತು. ಬೀರೇಶ್ವರ ಪಲ್ಲಕ್ಕಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಆಗಮಿಸಿದವು. ಪ್ರಸಿದ್ಧ ಡೊಳ್ಳಿನ ಹಾಡಿಕೆ ಜರುಗಿದವು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 