ಕಡಿಮೆ ಪಡಿತರ ಪೂರೈಕೆ: ಸತ್ಯಾಗ್ರಹದ ಎಚ್ಚರಿಕೆ
Low ration supply: Warning of Satyagraha
ಕಡಿಮೆ ಪಡಿತರ ಪೂರೈಕೆ: ಸತ್ಯಾಗ್ರಹದ ಎಚ್ಚರಿಕೆ
ಸಂಬರಗಿ 02: ಅನಂತಪುರ ಪಿಕೆಪಿಎಸ್ ಸಹಕಾರಿ ಸಂಘವು ನಡೆಸುತ್ತಿರುವ ಪಡಿತರ ಅಂಗಡಿಗಳಲ್ಲಿ ಪಡಿತರ ಕಡಿಮೆ ಪೂರೈಕೆ ಮಾಡುತ್ತಿದ್ದಾರೆ ಕಾರಣವನ್ನು ತನಿಖೆ ಮಾಡಿ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ನಾವು ಸತ್ಯಾಗ್ರಹ ನಡೆಸುತ್ತೇವೆ ಎಂದು ಕೃಷ್ಣ ತುಕಾರಾಮ ಖಡಕೇ ಮತ್ತು ಅವರ ಪತ್ನಿ ಕೋಮಲ್ ಖಡಕೇ ಎಚ್ಚರಿಸಿದ್ದಾರೆ.
ಅನಂತಪುರ ಗ್ರಾಮದಲ್ಲಿ ಮಾತನಾಡಿ ಅವರು ಜುಲೈನಲ್ಲಿ, ಪಡಿತರವು ಏಳು ಕಿಲೋ ಅಕ್ಕಿ ಮತ್ತು ಮೂರು ಕಿಲೋ ಜೋಳ ಎಂದು ನಿಯಮವಿದೆ. ಕುಟುಂಬದಲ್ಲಿ ಏಳು ಜನರ ಹೆಸರುಗಳು ಪಡಿತರ ಚೀಟಿಯಲ್ಲಿವೆ. ಅವರಲ್ಲಿ ಪ್ರತಿಯೊಬ್ಬರಿಗೂ ಹತ್ತು ಕಿಲೋ ಜ್ವಾಳ ಸಿರಿ 70 ಕಿಲೋ ಪಡಿತರ ಪಡೆಯುವುದು ಅವಶ್ಯಕ. ಅದರೆ 15 ಕಿಲೋ ಪಡಿತರ ಕಡಿಮೆಯಾಗಿದೆಯೇ ಎಂದು ಕೇಳಿದಾಗ, ಹಾರಿಕೆ ಉತ್ತರ ನೀಡಿ ವಿಷಯವನ್ನು ಮುಚ್ಚಿ ಹಾಕಿದರು. ಈ ಘಟನೆ ನನಗೆ ಎರಡು ಬಾರಿ ಸಂಭವಿಸಿದೆ. ಸರ್ಕಾರದಿಂದ ಒದಗಿಸಲಾದ ಪಡಿತರವನ್ನು ಸರಿಯಾದ ರೀತಿಯಲ್ಲಿ ಪೂರೈಸಲಾಗಿಲ್ಲ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ನ್ಯಾಯ ಒದಗಿಸಬೇಕು ಮತ್ತು ಸರ್ಕಾರದ ನಿಯಮಗಳ ಪ್ರಕಾರ ನಮಗೆ ಪಡಿತರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಇಲ್ಲದಿದ್ದರೆ ನಾವು ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತೇವೆ.
ಪಡಿತರ ಏಕೆ ಕಡಿಮೆಯಾಗಿದೆ ಎಂದು ಕೇಳಿದ ನಂತರ, ಅವರು ಅಲ್ಲಿನ ಸ್ಥಳೀಯ ಸಂಘದ ಅಧಿಕಾರಿಗಳನ್ನು ಕೇಳಿದಾಗ, ನಂತರ ನೀಡೋಣ ಎಂದು ಉತ್ತರಿಸಲು ಹಿಂಜರಿಯುತ್ತಾರೆ ಮತ್ತು ವಿಷಯವನ್ನು ಕೊನೆಗೊಳಿಸುತ್ತಾರೆ. ಇದು ಆಗಾಗ್ಗೆ ನಡೆಯುತ್ತಿರುವ ಘಟನೆಯಾಗಿದೆ. ನಮ್ಮ ಘಟನೆ ಸಮಗ್ರ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತದೆ. ಈ ವೇಳೆ ಪತ್ನಿ ಕೋಮಲ್ ಖಡಕೆ ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 