ಅಂಧತ್ವವನ್ನು ತೊರೆಯುವುದೇ ಕಾತರ್ಿಕೋತ್ಸವ
ಲೋಕದರ್ಶನ ವರದಿ
ಹಾವೇರಿ23: ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಹೊಸ್ತಿಲ ಹುಣ್ಣಿಮೆಯ ಪ್ರಯುಕ್ತ ಬುಧವಾರ ಸಾಯಂಕಾಲ ಮೈಲಾರಲಿಂಗೇಶ್ವರ (ಗುಡ್ಡದಯ್ಯ ದೇವರ) ಕಾತರ್ಿಕೋತ್ಸವ ಜರುಗಿತು.
ಕಾತರ್ಿಕೋತ್ಸವ ಎಂಬುದು ಮಾನವ ಜೀವಿಯು ತನ್ನ ಬದುಕಿನಲ್ಲಿ ಬರುವ ಅಂಧಕಾರವನ್ನು ತೊರೆದು ಹಾಕಿ ಅಜ್ಞಾನವೆಂಬ ದುಃಖವನ್ನು ಜ್ಞಾನವೆಂಬ ಹಣತೆಯ ಮೂಲಕ ಹೊಡೆದೊಡಿಸುವ ಸಂಕೇತವಾಗಿದೆ. ದೀಪವೆಂಬ ಜ್ಯೋತಿ ಬೆಳಗಿಸಿ ತನ್ನ ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಕಾರಿಯಾಗಿದೆ ಎಂದು ಗೊರವಪ್ಪಜ್ಜ ಅಂದಾನಪ್ಪ ಹೇಳಿದರು.
ನಂತರ ಕಾರ್ಯಕ್ರಮದಲ್ಲಿ ಗೊರವಪ್ಪನವರು ಶಸ್ತ್ರ ಹಾಕಿಕೊಂಡು ಸರಪಳಿ ಪವಾಡ ಹಾಗೂ ಒಡಪುಗಳನ್ನು ಹೇಳಿದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮದ ಗೊರವಪ್ಪರುಗಳಾದ ತಿರಕಪ್ಪ ಕಳಸಣ್ಣವರ ದೇವಪ್ಪ ಕರೇಗೌಡ್ರ, ಫಕ್ಕೀರಪ್ಪ ಚೌಟಗಿ, ಮಾತರ್ಾಂಡಪ್ಪ ಕಳಸಣ್ಣನವರ ಹಾಗೂ ಗ್ರಾಮದ ಮುಖಂಡರು ಭಕ್ತಾದಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 