ದಿ ಎಚ್ ವಾಯ್ ಮೇಟಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ
An emotional tribute to The H Vai Matee
ಮುದ್ದೇಬಿಹಾಳ 06: ಇಂದು ಸಂತ ಕನಕದಾಸ ಶಾಲೆಯಲ್ಲಿ ಮುದ್ದೇಬಿಹಾಳ ತಾಲ್ಲೂಕ ಕುರುಬರ ಸಂಘ ಹಾಗೂ ಸಂತ ಕನಕದಾಸ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಅಗಲಿದ ದೀಮಂತ ನಾಯಕ ದಿ ಎಚ್ ವಾಯ್ ಮೇಟಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ತಾಲೂಕ ಕುರಬರ ಸಂಘದ ಅದ್ಯಕ್ಷರಾದ ಎಮ್ ಎನ್ ಮದರಿ ಮಾತನಾಡಿ ಸಾಧಿಸಬೇಕು ಎಂಬ ಛಲ ಇದ್ದವರಿಗೆ ಸಾಧನೆ ಅನ್ನುವುದು ಒಂದು ಮುಷ್ಠಿಯಂತೆ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಶಾಸಕರಾಗಿ ,ಮಂತ್ರಿಗಳಾಗಿ ಸಂಸದರಾಗಿ ಸಮಾಜಪರ ಕೆಲ ಕಾರ್ಯ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು ಶಾಲೆಯ ಅದ್ಯಕ್ಷರಾದ ಮಲ್ಕೇಂದ್ರಾಗೌಡ ಪಾಟೀಲ ಮಾತನಾಡಿ ಸಮಾಜದ ಜೊತೆಯಲ್ಲಿ ಒಡನಾಡಿಗಳಾಗಿ ಬಡವರ ಸೇವೆಯನ್ನು ಮಾಡಿಕೊಂಡ ಎಲ್ಲರ ಜೊತೆಯಲ್ಲಿ ಬಾಂದವ್ಯದಿಂದ ಇದ್ದವರು ಎಂದು ಹೇಳಿದರುಸಮಾಜ ಸೇವಕರಾದ ವಾಯ್ ಎಚ್ ವಿಜಯಕರ ,ಹಾರ್ವರ್ಡ ಪಿ ಯು ಕಾಲೇಜಿನ ಅದ್ಯಕ್ಷರಾದ ಎಸ್ ಎಮ್ ನೆರಬೆಂಚಿ ,ಶಿಕ್ಷಕರಾದ ಎಸ್ ಎಮ್ ಲಕ್ಕಣ್ಣನವರ ಮುಂತಾದವರು ಮಾತನಾಡಿದರು ಕಾರ್ಯಕ್ರಮದಲ್ಲಿ ಬಿ ಹೆಚ್ ಹಾಲಣ್ಣನವರ ,ಬಿ ಎಸ್ ಶಿರೋಳ , ಬಿ ಎಸ್ ಮೇಟಿ ,ಎಸ್ ಎನ್ ಮೇಲಿನಮನಿ ,ಎಸ್ ಎಸ್ ನಾಯ್ಕೋಡಿ ,ಯಲ್ಲಪ್ಪ ಚಲವಾದಿ,ಬಿ ಎಸ್ ಬಿಜ್ಜೂರು ,ನಾಗಣ್ಣ ಲಕ್ಕಣ್ಣನವರ ,ಮಲ್ಲಣ್ಣ ಕೆಸರಟ್ಟಿ ಹಣಮಂತ್ರಾಯ ಕೊಂಗನೂರು ,ವಾಯ್ ವಾಯ್ ಮುತ್ತತ್ತಿ ,ವಲ್ಲಿಸಾ ನಾಯ್ಕೋಡಿ ಹಾಗೂ ಪ್ರೌಢ ಶಾಲೆಯ ಮುಖ್ಯ ಗುರು ಬಿ ಎಸ್ ಪಣೇದಕಟ್ಟಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ಎಮ್ ಎನ್ ಯರಝರಿ ಶಿಕ್ಷಕರು ,ಗುರುಮಾತೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು ಗೋಪಾಲ ಹೂಗಾರ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 