ಉಗಾರ ಖುರ್ದ ಶಾಲೆ ವಿದ್ಯಾಥರ್ಿಗಳಿಗೆ ಶೂ ವಿತರಣೆ
ವಿದ್ಯಾಥರ್ಿಗಳಿಗೆ ಶೂ ವಿತರಿಸುವಾಗ ಪುರಸಭೆ ಆಧ್ಯಕ್ಷ ಶಶಿಕಾಂತ ಕಾಂಬಳೆ, ಸದಸ್ಯರು ಮುಖ್ಯಾಧ್ಯಾಪಕರು ಇದ್ದರು.
ಕಾಗವಾಡ 03: ರಾಜ್ಯ ಸರಕಾರ ಎಲ್ಲ ಸರಕಾರಿ ಶಾಲೆಯ ವಿದ್ಯಾಥರ್ಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್ ಮಧ್ಯಾಹ್ನದ ಬಿಸಿ ಊಟದೊಂದಿಗೆ ವಿದ್ಯಾಥರ್ಿಗಳಿಗೆ ಶೂಸ್ ವಿತರಿಸಿ, ಕಾನ್ವೆಂಟ್ ಶಾಲೆಯ ವಿದ್ಯಾಥರ್ಿಗಳಂತೆ ಎಲ್ಲ ಸೌಕರ್ಯ ನೀಡುತ್ತಿದ್ದಾರೆ. ಈ ಮುಂದೆ ವಿದ್ಯಾಥರ್ಿಗಳ ಹಾಜರಾತಿ ಹೆಚ್ಚಿಸಿ, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದರೆ, ಸರಕಾರಿ ಶಾಲೆಗಳು ಮಾದರಿಯಾಗಲು ಸಾಧ್ಯ ಎಂದು ಉಗಾರ ಪುರಸಭೆ ಆಧ್ಯಕ್ಷ ಶಶಿಕಾಂತ ಕಾಂಬಳೆ ಹೇಳಿದರು.
ಮಂಗಳವಾರ ದಿ. 2ರಂದು ಉಗಾರ ಖುರ್ದ ಪಟ್ಟಣದ ಸರಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 512 ವಿದ್ಯಾಥರ್ಿಗಳಿಗೆ ಪುರಸಭೆ ಆಧ್ಯಕ್ಷ ಶಶಿshoo ಕಾಂತ ಕಾಂಬಳೆ ಹಾಗೂ ಸದಸ್ಯರು ಶೂ ವಿತರಿಸಿ, ಮಾತನಾಡಿದರು.
ಅಧ್ಯಕ್ಷತೆ ಎಸ್.ಡಿ.ಎಂ.ಸಿ ಆಧ್ಯಕ್ಷ ಅನೀಲ್ ಬೇನಾಡೆ ವಹಿಸಿದ್ದರು. ಪುರಸಭೆ ಸದಸ್ಯರಾದ ವಿಜಯ್ ಆಸೂದೆ, ಅವಿನಾಶ ಮೋರೆ, ಅಲ್ತಾಫ್ ನದಾಫ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಮವ್ವಾ ಕಾಂಬಳೆ, ಸದಸ್ಯರಾದ ಗೌರವ್ವಾ ಮಗದುಮ್ಮ, ದೀಪಾಲಿ ಕುಂಬಾರ, ಲಕ್ಷ್ಮೀ ಬೇರಗುಡ್ ಸೇರಿದಂತೆ ಶಿಕ್ಷಕರು, ಪಾಲಕರು ಪಾಲ್ಗೊಂಡಿದ್ದರು. ಮುಖ್ಯಾಧ್ಯಾಪಕ ಆರ್.ಎಂ.ಜಾಯಗೊಂಡೆ ಸ್ವಾಗತಿಸಿ, ಕೆ.ಎಂ.ದೀವೆಕರ್ ವಂದಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 