ಮೇ. 14 ರಂದು ಶ್ರೀ ರಾಜರಾಜೇಶ್ವರಿ ರಥೋತ್ಸವ

ಯರಗಟ್ಟಿ 02: ಸ್ಥಳೀಯ ಶ್ರೀ ರಾಜರಾಜೇಶ್ವರಿ ಜಾತ್ರಾ ಪೂರ್ವಭಾವಿ ಸಭೆ ಆಶ್ರಮದಲ್ಲಿ ಜರುಗಿತು. 

ಆಶ್ರಮದ ಗಣಪತಿ ಮಹಾರಾಜರು ಮಾತನಾಡಿ, ದೇವಿ ಆರಾಧಕರ ಅಭಿಪ್ರಾಯದಂತೆ 15 ನೇ ವರ್ಷದ ಜಾತ್ರೆಯಂಗವಾಗಿ ಮೇ. 10 ರಂದು ಚಂಡಿಕಾ ಹೋಮ, 13 ರಂದು ಪಲ್ಲಕ್ಕಿ ಉತ್ಸವ ಪುರ​ಪ್ರವೇಶ, ಮೇ. 14 ರಂದು ಮುಂಜಾನೆ 11-00ಕ್ಕೆ ವೇದಾಂತ ಪರಿಷತ್ತು ಹಾಗೂ ಸಂಜೆ 05-00 ಗಂಟೆಗೆ ರಾಜರಾಜೇಶ್ವರಿ ರಥೋತ್ಸವ ನಡೆಯಲಿದೆ ಎಂದರು.  

ಈ ಸಭೆಯಲ್ಲಿ ಪಿ. ಎಚ್‌. ಪಾಟೀಲ, ಸೋಮಲಿಂಗಯ್ಯ ವಿರಕ್ತಮಠ, ರಾಜೇಂದ್ರ ವಾಲಿ, ರಾಮಚಂದ್ರಗೌಡ ಪಾಟೀಲ, ರಾಮಪೂರದ ಕೃಷ್ಣ ಲೋಹಾರ, ಸಿದ್ದಯ್ಯಾ ವಡೆಯರ, ಮೌನೇಶ ಮಾಯಾಚಾರಿ, ತಮ್ಮಣ್ಣಾ ಕಾಮಣ್ಣವರ, ರಾಜೇಂದ್ರ ಶೆಟ್ಟಿ ರಾಜಣ್ಣ ಅಕ್ಕಿ ಸೇರಿದಂತೆ ಅಪಾರ ಭಕ್ತರು ಸೇರಿದ್ದರು.