ಮಳೆರಾಯನ ಕೃಪೆಗಾಗಿ ಕಪ್ಪೆಗಳ ಮದುವೆ ಮಾಡಿದ ಮುದೇನೂರ ಗ್ರಾಮಸ್ಥರು
ಮಳೆರಾಯನ ಕೃಪೆಗಾಗಿ ಮುದೇನೂರ ಗ್ರಾಮಸ್ಥರು ಕಪ್ಪೆಗಳ ಮದುವೆ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವುದು.
ಲೋಕದರ್ಶನ ವರದಿ
ರಾಮದುರ್ಗ: ಪ್ರಾರಂಭದಲ್ಲಿ ಆದ ಅಲ್ಪಸ್ವಲ್ಪ ಮಳೆಯನ್ನು ನಂಬಿ, ಮಳೆರಾಯನ ಕೃಪೆಯ ಭರವಸೆಯಲ್ಲಿ ಭೂಮಿ ಬಿತ್ತನೆ ಮಾಡಿದ ರೈತರಿಗೆ ಮತ್ತೆ ಮಳೆಯಾಗದೇ ಆತಂಕದ ಛಾಯೆ ಅಧಿಕೊಗೊಳ್ಳುತ್ತಿರುವುದು ಒಂದೆಡೆದಾರೆ, ಮೊತ್ತೊಂದೆಡೆ ಕತ್ತೆ, ಕಪ್ಪೆಗಳ ಮದುವೆ ಮಾಡುವ ಪರಂಪರೆಯಿಂದರೂ ರೈತರು ಇನ್ನು ಹೊರಬಂದಿಲ್ಲ.
ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಮದೇನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಮುದೇನೂರ ಗ್ರಾಮದಲ್ಲಿ ಕಪ್ಪೆಗಳ ಮದುವೆ ಮಾಡಿ, ಮಳೆರಾಯನ ಕೃಪೆಗೆ ಅಂಗಲಾಚಿದ ಘಟನೆ ನಡೆದಿದೆ.
ಮದುವೆ ಊಟ ಉಣಬಡಿಸಿದ ರೈತರುಃ
ಮಾನವರಿಗೆ ಮಾಡುವ ಮದುವೆ ಸಂಪ್ರದಾಯದಂತೆ ಗಂಡು ಹೆಣ್ಣಿನ ಕಡೆಯಿಂದ ನಡೆಯಬೇಕಾದ ಮದುವೆ ಪೂರ್ವದ ವಿಶಿಷ್ಠ ಸಂಪ್ರದಾಯವನ್ನು ಆಚರಣೆ ಮಾಡಿ, ನಂತರ ಸೇರಿದಂತೆ ಸರ್ವ ಜನತೆಗೂ ಮುದವೆ ದಿಬ್ಬನದ ಊಟ ಉಣಬಡಿಸಿ ಸ್ಥಳೀಯ ದೇವರಲ್ಲಿ ಮಳೆಗಾಗಿ ಪ್ರಾರ್ಥಸಿದರು.
ಹೋಮ-ಹವನಃ
ನಾಡಿನಲ್ಲಿ ಮಳೆ ಬೆಳೆ ಸಮೃದ್ಧಿಯಾಗಲಿ ಎಂಬಂತೆ ವಿವಿಧ ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನ ನೆರವೇರಿಸುವ ಮೂಲಕ ರೈತರು ಮಳೆರಾಯನ ಕೃಪೆಗಾಗಿ ವಿವಿಧ ಸಂದ್ರದಾಯಗಳ ಆಚರಣೆಗೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಮುದೇನೂರ ಗ್ರಾಮಸ್ಥರಾದ ನಾಗಪ್ಪ ವಜ್ರಮಟ್ಟಿ, ತಿಮ್ಮಣ್ಣ ಹಕಾಟಿ, ಅಲ್ಲಿಸಾಬ ಕಡಕೋಳ, ಅಜರ್ುನ ಸಿಂಗಾಡಿ, ಬಸವರಾಜ ಗುಟ್ಟಿ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಹಾಗೂ ಇತರರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 