ವರುಣನ ಕೃಪೆಗಾಗಿ ಪಟ್ಟಣದಲ್ಲಿ ಮಳೆ ಮಲ್ಲಪ್ಪನ ಪೂಜೆ
ಕೂಡ್ಲಿಗಿ04: ತಾಲ್ಲೂಕಿನಾದ್ಯಾಂತ ಮುಂಗಾರು ಮಳೆ ಅಬ್ಬರದಿಂದ ಪ್ರಾರಂಭವಾಗಿ ಕಳೆದ ಹದಿನೈದು ದಿನಗಳಿಂದ ಕಣ್ಮರೆಯಾಗಿರುವ ವರುಣನ ಕೃಪೆಗಾಗಿ ಪಟ್ಟಣದಲ್ಲಿ ಮಳೆ ಮಲ್ಲಪ್ಪನ ಪೂಜೆ ಮಾಡಲಾಯಿತು.
ಬೆಳಿಗ್ಗೆ ಎಲ್ಲಾ ಗ್ರಾಮಸ್ಥರು ಸೇರಿ ಗ್ರಾಮ ದೇವತೆಗೆ ಪೂಜೆ ಮಾಡಿ ಗ್ರಾಮ ದೇವತೆಯ ಹೊಂಡದಿಂದ 101 ಕೊಡ ತಂದು ಊರ ಮುಂದಿನ ಬುಡ್ಡೇಕಲ್ಲಿಗೆ ನೀರಿನ ಅಭಿಷೇಕ ಮಾಡಲಾಯಿತು. ನಂತರ ದೈವಸ್ಥರು ಸೇರಿ ಊರಮ್ಮನ ಹೊಂಡದಲ್ಲಿ ಗಂಗೆ ಪೂಜೆಯನ್ನು ನೆರವೇರಿಸಿ, ಹೊಸ ಮಡಿಕೆಯಲ್ಲಿ ಗಂಗೆಯನ್ನು ತಂದು ಊರಮ್ಮನ ದೇವಸ್ಥಾನದ ಪ್ರಾಂಗಣದಲ್ಲಿ ವಿದಿ ವಿಧಾನಗಳ ಮೂಲಕ ಜೋಳದ ಕಾಳುಗಳ ರಾಶಿ ಹಾಕಿ ಅದರ ಮೇಲೆ ನೀರು ತುಂಬಿದ ಮಡಿಕೆಯನ್ನು ಮಳೆ ಮಲ್ಲಪ್ಪನ ಹೆಸರಿನಲ್ಲಿ ಪ್ರತಿಷ್ಠಾಪನೆ ಮಾಡಿದರು. ಮಡಿಕೆಯ ಮೇಲೆ ಹೊಸ ಮೊರವನ್ನು ಬೋರಲು ಹಾಕಿ, ಅದರ ಮೇಲೆ ಈ ಮೊದಲೇ ಪೂಜಿಸಿ ಕರೆತಂದಿರುವ ಬಣಕಾರ ವಂಶಸ್ಥರ ಬಾಲಕನೊಬ್ಬನನ್ನು ಕೂಡಿಸಿದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಪೂಜೆಯನ್ನು ನಡೆಸಲಾಯಿತು. ನಂತರ ಪಟ್ಟಣದ ಪ್ರಮುಖರು ಮಳೆಮಲ್ಲಪನ ಆವಾಹನೆಯಾಗಿರುವ ಬಾಲಕನ ಮಳೆಯ ಕುರಿತು ಹೇಳಿಕೆಯನ್ನು ಕೇಳಿದರು.
ಮಡಕೆ ಬಲ ದಿಕ್ಕಿಗೆ ತಿರುಗಿದರೆ ಉತ್ತಮ ಮಳೆಯಾಗುವುದು ಎಂದು ಮಳೆಯ ಭವಿಷ್ಯವನ್ನು ನಿರ್ಧರಿಸಲಾಗುವುದು. ಈ ಬಾರಿ ಮಡಕೆ ಉತ್ತಮವಾಗಿ ಬಲದಿಕ್ಕಿಗೆ ತಿರುಗಿದ್ದರಿಂದ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಊರಿನ ದೈವಸ್ಥರು ಮಳೆ ಮಲ್ಲಪ್ಪನ ಪೂಜೆಯನ್ನು ಸಂಪನ್ನಗೊಳಿಸಿ ಸೇರಿದ್ದ ಜನತೆಗೆ ಪ್ರಸಾದ ವಿನಿಯೋಗ ಮಾಡಿದರು.
ಪಟ್ಟಣದ ಪ್ರಮುಖರಾದ ಹಿ.ಮ. ತಿಪ್ಪೇಸ್ವಾಮಿ, ಬಣಕಾರ ಮಂಜುನಾಥ, ಮಲ್ಲಾಪುರ ಭರಮಣ್ಣ, ಸಣ್ಣ ತಿಮ್ಮಣ್ಣ, ಅಂಗಡಿ ಗಣೇಶ್, ಅಕ್ಕಸಾಲಿ ನಾಗರಾಜ, ಪೂಜಾರಿ ಈರಣ್ಣ, ಬಾಣದ ಮೂತರ್ಿ, ಸಣ್ಣ ಕೊತ್ಲಪ್ಪ, ಸೋಗಿ ಗುರುಸಿದ್ದಪ್ಪ, ನರಸಿಂಹಪ್ಪ ಸೇರಿದಂತೆ ಅನೇಕರ ದೈವಸ್ಥರು ಪಾಲ್ಗೊಂಡಿದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 