ರಮೇಶ ಸಂಗಟಿಗೆ ಯುವರತ್ನ ಅಪ್ಪು ರಾಜ್ಯ ಪ್ರಶಸ್ತಿ ಪ್ರದಾನ

ಕಾರಟಗಿ 25: ತಾಲೂಕಿನ ಖಾಸಗಿ ಪತ್ರಿಕೆಯೊಂದರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ರಮೇಶ ಸಂಗಟಿ ಅವರಿಗೆ ಎಸ್‌.ಎಸ್‌. ಕಲಾಸಂಗಮ ಟ್ರಸ್ಟ್‌ ಬೆಂಗಳೂರು 2022-23 ನೇ ಸಾಲಿನ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.  

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಸಾಧಕರನ್ನು ಮತ್ತು ಯುವ ಸಾಧಕರನ್ನು ಪರಿಗಣಿಸಿ ನಾಡಿನ ಗೀತಗಾಯನ ರಸಮಂಜರಿ ಹಾಗೂ ಸಾಹಿತ್ಯ ಸಂಸ್ಕೃತಿಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿದ್ದು, ಈ ಬಾರಿ ಯುವರತ್ನ ಡಾ. ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ಕನ್ನಡದ ಯುವರತ್ನ ಪುನೀತ್ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದು ಪತ್ರಕರ್ತರಾದ ರಮೇಶ ಸಂಗಟಿ ಅವರಿಗೆ ಜೂನ್‌-25ರಂದು ಬೆಂಗಳೂರು ಎಲ್ ವಿ ವರದಾಚಾರ್ ಮೆಮೋರಿಯಲ್ ಹಾರ್ಟ್‌ ಮಲ್ಲೇಶ್ವರಂ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.