ವಿಶ್ವ ಆಹಾರ ಸುರಕ್ಷತಾ ದಿನ : ಆಹಾರದಿಂದ ಅನಾರೋಗ್ಯ ತಡೆಗಟ್ಟಲು ಕ್ರಮ
ವಿಶ್ವಸಂಸ್ಥೆ, ಜೂನ್ 7, ಜೂನ್ 7 ಭಾನುವಾರದಂದು ವಿಶ್ವ ಆರೋಗ್ಯ ಸುರಕ್ಷತಾ ದಿನ. ಆಹಾರದಿಂದ ಉಂಟಾಗಬಹುದಾದ ರೋಗಗಳನ್ನು ಪತ್ತೆ ಮಾಡಿ, ಅವುಗಳನ್ನು ತಡೆಗಟ್ಟಲು, ಆಹಾರ ಭದ್ರತೆಗೆ ಆದ್ಯತೆ ನೀಡುತ್ತಾ ಮಾನವ ಆರೋಗ್ಯ ಕಾಪಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಕಳೆದ ವರ್ಷ ಅಂದರೆ 2019 ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ಸುರಕ್ಷತಾ ದಿನ ಆಚರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಎಫ್ ಎ ಒ ಜಂಟಿಯಾಗಿ “ಆಹಾರ ಸುರಕ್ಷತೆ, ಎಲ್ಲರ ಆದ್ಯತೆ” ವಿಷಯವಾಗಿ ಅಭಿಯಾನ ಆರಂಭಿಸಿದೆ. ಜಾಗತಿಕವಾಗಿ ಆಹಾರ ಸುರಕ್ಷತೆಯ ಜಾಗೃತಿ ಮೂಡಿಸಲು ಈ ಅಭಿಯಾನ ಆರಂಭಿಸಿದೆ. ಆಹಾರ ಸುರಕ್ಷತೆಯತ್ತ ಗಮನಹರಿಸುವುದು ಸರ್ಕಾರಗಳು, ಆಹಾರ ಉತ್ಪಾದಕರು ಮತ್ತು ಗ್ರಾಹಕರ ಜಂಟಿ ಜವಾಬ್ದಾರಿಯಾಗಿದೆ. ಆಹಾರದಿಂದಾಗಿ ಜನರು ಅನಾರೋಗ್ಯಪೀಡಿತರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ಚಿಂತನೆ ನಡೆದಿದೆ. ವಿಶ್ವ ಆಹಾರ ದಿನದ ಮೂಲಕ ಆಹಾರ ಸುರಕ್ಷತೆ ಖಾತ್ರಿಪಡಿಸಿ ಜಾಗತಿಕವಾಗಿ ಆಹಾರದಿಂದ ಉಂಟಾಗಬಹುದಾದ ಕಾಯಿಲೆಗಳನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 