ಮಹಿಳಾ ಮೀಸಲಾತಿ ಬಗ್ಗೆ ಅಪಪ್ರಚಾರ ; ಮಹಿಳಾ ಮುಖಂಡರ ಆರೋಪ
Women leaders allege propaganda about women's reservation
ಗದಗ 29 : ಮಹಿಳಾ ಮೀಸಲಾತಿ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಮುಖಂಡರ ಆರೋಪಗಳನ್ನು ಖಂಡಿಸಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ಮುಖಂಡರು ಪತ್ರಿಕಾ ಗೋಷ್ಠಿ ನಡೆಸುತ್ತಿರುವುದಾಗಿ ಶಿರಹಟ್ಟಿ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಸುಜಾತಾ ದೊಡ್ಡಮನಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕ್ಷೇತ್ರ ಮರುವಿಂಗಡಣೆ ಮಾಡದೇ ಈಗಿರುವ ಸಂಖ್ಯೆಯ ಯಥಾಸ್ಥಿತಿಯನ್ನ ಕಾಯ್ದುಕೊಂಡು ಮಿಸಲಾತಿ ಮಾಡಿದರೆ ನಮ್ಮ ಅಭ್ಯಂತರ ಏನು ಇಲ್ಲ. ಮಹಿಳೆಯರ ಮನ ಒಲಿಸಲು ಮಹಿಳಾ ಮೀಸಲಾತಿ ತಂದಿದ್ದು ಮಹಿಳೆಯರಿಗೆ 5 ಗ್ಯಾರಂಟಿ ನೀಡಿದ್ದು ಕಾಂಗ್ರೆಸ್ ಸರಕಾರ.
ಮಹಿಳಾ ಮಿಸಲಾತಿ ಸೂದೆಯನ್ನ ಮುಂದಿಟ್ಟುಕೊಂಡು ಕ್ಷೇತ್ರಗಳ ಮರು ವಿಂಗಡಣೆ ಮಾಡಿ ಆದೇಶ ಹೊರಡಿಸಿರುವುದನ್ನ ನಾವು ಖಂಡಿಸುತ್ತೇವೆ.ಮಹಿಳೆಯರ ಅನೇಕ ಬೇಡಿಕೆಗಳನ್ನ ಕಾಂಗ್ರೆಸ್ ಪಕ್ಷ ಈಡೇರಿಸಿ ಪುಣ್ಯ ಸ್ಥಳಗಳ ಬೇಟಿಗೆ ಅವಕಾಶ ಕಲ್ಪಸಿ ಆರ್ಥಿಕವಾಗಿ ಮಹಿಳೆಯರ ಬದುಕು ಚಿಗುರುವಂತೆ ಗೌರವ ತಂದು ಕೊಡ್ಟಿದ್ದು ನಮ್ಮ ಪಕ್ಷ ಎಂದು ಸುಜಾತ ದೊಡ್ಡಮನಿ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರುಗಳಾದ ಸ್ವಾತಿ ಮಾಳಗಿ, ಸುರೇಖಾ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಗದಗ ಜಿಲ್ಲಾಧ್ಯಕ್ಷೆ ನೀಲಮ್ಮ ಬೋಳನ್ನವರ, ಜಯಕ್ಕ ಕಳ್ಳಿ, ನಾಜಿಯಾಬೇಗಂ ಎಲಿಗಾರ, ದಾನೇಶ್ವರಿ ಭಜಂತ್ರಿ, ಉಮಾ ದ್ಯಾವನೂರ, ಶೋಭಾ ದೇಸಳ್ಳಿ, ವೀಣಾ ಕಟ್ನಳ್ಳಿ ಸೇರಿದಂತೆ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 