ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭವ


ಶಿರಸಿ : ನಗರದ ಪೂಗ ಭವನದಲ್ಲಿ ವಿಜಯ ಕರ್ನಾಟಕ ದಿನ ಪತ್ರಿಕೆ  ಆಯೋಜಿಸಿದ್ದ ಸಾಧಕ ರೈತರನ್ನು ಗುರುತಿಸಿ ಗೌರವಿಸುವ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭವನ್ನು  ಕಾರ್ಮಿಕ ಖಾತೆ ಸಚಿವ  ಶಿವರಾಮ ಹೆಬ್ಬಾರ್ ಅವರು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದರು. 

ಕೃಷಿಯಲ್ಲಿ ವಿಶಿಷ್ಟ ಹಾಗೂ ಕೌಶಲ್ಯ ಪೂರ್ಣ ಸಾಧನೆ ಮಾಡಿರುವ ಜಿಲ್ಲೆಯ ಪ್ರಗತಿಪರ ರೈತರನ್ನು ಸಚಿವರು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಎ.ಪಿ.ಎಮ್‌.ಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡ, ರಾಜ್ಯ ಗ್ರಾಹಕರ ಸಹಕಾರಿ ಮಂಡಳ ನಿರ್ದೇಶಕ ಶ್ರೀಪಾದ ಆರ್‌.ಹೆಗಡೆ, ಉದ್ಯಮಿ ಉಪೇಂದ್ರ ಪೈ, ಹಾಗೂ ಸ್ಥಳೀಯ ಪ್ರಮುಖರು,  ಪತ್ರಿಕೆಯ ಪ್ರಮುಖರು ಉಪಸ್ಥಿತರಿದ್ದರು.