ಮತದಾನ ಪವಿತ್ರ ಹಕ್ಕು ಕಡ್ಡಾಯವಾಗಿ ಮತದಾನ ಮಾಡಿ: ಶರಣಪ್ಪ ಕೆಳಗಿನಮನಿ

ಕುಕನೂರ 31: ಶೀಘ್ರದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಜರುಗಲಿರುವ ಪ್ರಯುಕ್ತ ಸಾರ್ವಜನಿಕರಲ್ಲಿ ಮತ್ತು ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕುಕನೂರ ತಾಲೂಕಿನ ಇಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಮಹೇಶ್ವರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ಮತ್ತು ಅಣಕು ಮತದಾನ ಮಾಡಿಸುವ ಮೂಲಕ ಇಗಿಒ ಮತ್ತು ಗಿಗಿಕಂಖಿ ಕುರಿತು ಮಾಹಿತಿ ನೀಡಲಾಯಿತು.  

ಕಾರ್ಯಕ್ರಮದಲ್ಲಿ ಪಿ.ಆರ್‌.ಇ.ಡಿ ಇಂಜಿನಿಯರ್ ಪ್ರವೀಣ ನಾಗನೂರ, ಇ.ವಿ.ಎಮ್‌. ಅಸೆಂಬ್ಲಿ ಮಾಸ್ಟರ್ ಟ್ರೇನರ್ ಸಿ.ಎಸ್ ಅಂಗಡಿ, ಮಹೇಶ್ವರ ಪದವಿ ಪೂರ್ವ ಕಾಲೇಜಿನ ಎಸ್ ಆರ್ ಕುಲಕರ್ಣಿ, ತಾಲೂಕ ಐಇಸಿ ಸಂಯೋಜಕರು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.