ಮೆಹಂದಿ ಮೂಲಕ ಮತದಾನ ಜಾಗೃತಿ

ಹುಕ್ಕೇರಿ  22; ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ, ಎಪ್ ವಿ ಟಿ ಆರ್ ಎಸ್ ಸಂಸ್ಥೆ, ಬೆಂಗಳೂರು ಹಾಗೂ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ಯಲ್ಲಾಪೂರ-ಕರಗುಪ್ಪಿ ಇವರ ಸಹಯೋಗದಲ್ಲಿ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ಮೆಹಂದಿ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ ಕಡ್ಡಾಯವಾಗಿ ಮತದಾನ ಮಾಡುವುದು ಅವಶ್ಯಕವಾಗಿದೆ ದೇಶದಲ್ಲಿ ಉತ್ತಮ ಆಡಳಿತವನ್ನು ಪಡೆಯಬೇಕಾದರೆ ಪ್ರತಿಯೊಬ್ಬರು ಮತದಾನ ಮಾಡಬೇಕು. ನಾನ ಒಬ್ಬ ಮತದಾನ ಮಾಡದಿದ್ದರೆ ಏನಾಗುತ್ತೆ ಅನ್ನೋ ಮನೋಭಾವ ಬಿಟ್ಟು ನಮ್ಮ ಒಂದು ಮತದಾನದಿಂದ ದೇಶದ ಭವಿಷ್ಯ  ನಿರ್ಧಾರವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಮತದಾನ ಮಾಡಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಎಪ್ ವಿ ಟಿ ಆರ್ ಎಸ್ ಸಂಸ್ಥೆಯ ಕ್ಷೇತ್ರ ಸಂಯೋಜಕ ಬಸವರಾಜ ಮಣ್ಣಿಕೇರಿ ಉಪಸ್ಥಿತರಿದ್ದರು 35 ಕ್ಕೂ ಹೆಚ್ಚಿನ ಮಹಿಳೆಯರು ಮೆಹಂದಿ ಮೂಲಕ ಜಾಗೃತಿ ಮೂಡಿಸಿದರು.