ಬೀದಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಮತದಾನ ಜಾಗೃತಿ-ಅರಿವು

ಹಾವೇರಿ 25: ಸಾರ್ವತ್ರಿಕ ಲೋಕಸಭಾ ಚುನಾವಣೆ ನಿಮಿತ್ತವಾಗಿ ನಗರಸಭೆಯ ವತಿಯಿಂದ ನಗರದ ಎಲ್‌.ಬಿ.ಎಸ್ ಮಾರ್ಕೆಟಿನಲ್ಲಿ ಬೀದಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಮತದಾನ ಜಾಗೃತಿ-ಅರಿವು ಹಮ್ಮಿಕೊಳ್ಳಲಾಯಿತು. 

ಜನಪದ ಸಾಹಿತ್ಯದಲ್ಲಿ ಅಮೋಘ ಸಾಧೆನೆ ಮಾಡುತ್ತಿರುವ  ಓಂ ಶಕ್ತಿ ಸಾಂಸ್ಕೃತೀಕ ಮತ್ತು ಜಾನಪದ ಕಲಾ ಸಂಸ್ಥೆ,ಹಾವೇರಿ ಇವರಿಂದ ಜರುಗಿದ ಬೀದಿ ನಾಟಕವನ್ನು ನಗರಸಭೆ ಪೌರಾಯುಕ್ತರಾದ ಪರಶುರಾಮ ಚಲವಾದಿ ಅವರು ಉದ್ಘಾಟನೆ ಮಾಡಿದರು.ನಂತರ ಮಾತನಾಡಿದ ಅವರು 18 ವರ್ಷ ಮೇಲ್ಪಟವರು ಕಡ್ಡಾಯವಾಗಿ ಮೇ-07ರಂದು ಮತದಾನವನ್ನು ಮಾಡಬೇಕು.ಪ್ರಜಾಪ್ರಭುತ್ವದ ಯಶಸ್ಸು ದೇಶದ ಪ್ರಜೆಗಳು ತಮ್ಮ ಜವಾಬ್ದಾರಿಯಾದ ಮತದಾನ ಮಾಡಿದರೆ ಅದು ಸಾಧ್ಯವಾಗಲಿದೆ ಎಂದರು.ನಗರಸಭೆಯ ಎಲ್ಲಾ ಅಧಿಕಾರಿ-ಸಿಬ್ಬಂದಿಗಳು,ಕಲಾ ತಂಡದವರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಲಾಯಿತು.