ಸಿದ್ಧಗಂಗೆ ಬೇಸಿಗೆ ಶಿಬಿರದ ಮಕ್ಕಳಿಂದ ಮತದಾನ ಜಾಗೃತಿ

ಮಹಾಲಿಂಗಪುರ 25: ಬುಧವಾರ ಸ್ಥಳೀಯ ಶ್ರೀ ಬಸವಾನಂದ ಶಾಲೆಯಲ್ಲಿ ನಡೆಯುತ್ತಿರುವ ಸಿದ್ಧಗಂಗೆ ಬೇಸಿಗೆ ಶಿಬಿರದ ಮಕ್ಕಳಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. 

ಮಕ್ಕಳು ಮುಂಬರಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಜಾತಿ, ಮತ ಪಂಥ ಮತ್ತು ಆಸೆ ಆಮಿಷಗಳಿಗೆ ಒಳಗಾಗದೆ, ತಮಗೆ ಯೋಗ್ಯವೆನಿಸಿದ ಅಭ್ಯರ್ಥಿಗೆ ಮತದಾನ ಮಾಡಬೇಕೆಂದು ತಮ್ಮ ಕುಟುಂಬಸ್ಥರಲ್ಲಿ ಮನವಿ ಮಾಡಿ ಅವರಿಗೆ ಪತ್ರಗಳನ್ನು ಬರೆದರು.  

ಬಸವಾನಂದ ಬ್ರಹ್ಮ ವಿದ್ಯಾಶ್ರಮ ಟ್ರಸ್ಟಿನ ಸದಸ್ಯರು ಹಾಜರಿದ್ದರು. ಸ್ವೀಪ್ ನೋಡಲ್ ಶಿಕ್ಷಕ ಎಸ್ ಎಂ ಮುಗಳಖೋಡ್, ಮುಖ್ಯ ಶಿಕ್ಷಕ ಎಸ್ ಕೆ. ಗಿಂಡೆ, ಸಿಆರ್‌ಪಿ ಎಸ್ ಎನ್ ಬ್ಯಾಳಿ, ಶಿಕ್ಷಕರಾದ ಸಿ ವಿ ಹುಣಶ್ಯಾಳ, ಎಸ್ ಡಿ ಕಾಂಬ್ಳೆಕರ, ತೌಫಿಕ್ ಮಾಲಾಪುರ್, ಹನುಮಂತ ಆದೆಪ್ಪನವರ್ ಹಾಗೂ ಶಾಲೆಯ ಇನ್ನಿತರ ಸಿಬ್ಬಂದಿ ವರ್ಗದವರು ಹಾಗೂ ಪುರಸಭೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.