ಮತದಾನ ಜಾಗೃತಿ ಜಾಥಾ

ವಿಜಯಪುರ, ಮಾ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ  ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಎನ್‌.ಎಸ್‌.ಎಸ್ ಘಟಕ, ಬಿಎಲ್‌ಡಿಇ ಸಂಸ್ಥೆಯ ಜೆ.ಎಸ್‌.ಎಸ್‌. ಶಿಕ್ಷಣ  ಮಹಾವಿದ್ಯಾಲಯ, ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ನಗರದಲ್ಲಿ ಮಂಗಳವಾರದಂದು ಬೃಹತ್ ಮತದಾನ ಜಾಗೃತಿ ಜಾಥಾ ಏರಿ​‍್ಡಸಲಾಯಿತು. 

ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಪ್ರಮುಖ ಮಾರ್ಗ ಮೂಲಕ ಗಾಂಧಿ ಚೌಕ್ ವರೆಗೆ ಸಾಗಿ ಮತದಾನದ ಮಹತ್ವವನ್ನು ಘೋಷಿಸುವುದರ ಮೂಲಕ  ಜನರಲ್ಲಿ ಮತದಾನದ ಮಹತ್ವವನ್ನು ತಿಳಿಸಲಾಯಿತು. 

ವಿಜಯಪುರ ಜಿಲ್ಲೆಯಲ್ಲಿ ಪ್ರತಿಶತ 90 ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವಂತೆ ಶ್ರಮಿಸಲು ಸ್ವಯಂ ಸೇವಕರೊಂದಿಗೆ ಚರ್ಚಿಸಲಾಯಿತು. ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರಕ್ಕಿಂತ ಹೆಚ್ಚಿನ ಸ್ವಯಂಸೇವಕ / ಸೇವಕರಿದ್ದು, ತಲಾ ಹತ್ತು ಜನರಿಗೆ ಮತದಾನ ಮಾಡಿಸಲು ಗುರಿ ಹೊಂದಲು ಸ್ವಯಂ ಸೇವಕರಿಗೆ ತಿಳಿಸಲಾಯಿತು. ಇದೇ ವೇಳೆ ಮತದಾನ ಕುರಿತು ಪ್ರತಿಜ್ಞಾವಿಧಿಯನ್ನು ಭೋಧಿಸಲಾಯಿತು.   

ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ.ಆರ್‌. ಮುಂಡರಗಿ, ರಾಜ್ಯ ಎನ್‌. ಎಸ್‌.ಎಸ್‌. ಸಲಹಾ ಸಮಿತಿ ಸದಸ್ಯರಾದ ಡಾ. ಜಾವೀದ್ ಜಮಾದಾರ್, ಜಿಲ್ಲಾ  ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ. ಪ್ರಕಾಶ್ ರಾಠೋಡ , ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಬಿ. ವೈ. ಖಾಸನೀಸ್ , ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಡಾ. ಸುಮಾ ಬೋಲ್ ರೆಡ್ಡಿ, ಪ್ರಾಧ್ಯಾಪಕರಾದ ಡಾ. ಮಂಜುನಾಥ್ ಕೋಟಿ, ಡಾ. ಬಿ.ಎಸ್‌. ಹಿರೇಮಠ್ ಪ್ರಾಧ್ಯಾಪಕರು, ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ರಾವ್ ಬಹದ್ದೂರ ಭಾಗವಾನ್, ವಿಶ್ವನಾಥ್  ಹಾಗೂ ಸ್ವಯಂ ಸೇವಕ, ಸೇವಕಿಯರು  ಈ ಬೃಹತ್  ಜಾಥಾದಲ್ಲಿ  ಪಾಲ್ಗೊಂಡಿದ್ದರು