ನಿರ್ಭತಿ ಮತದಾನ ಮಾಡಿ ದೇಶದ ಭವಿಷ್ಯ ನಿರ್ಧರಿಸಿ : ಈರಣ್ಣ ದಡ್ಡಿ

ಮಹಾಲಿಂಗಪುರ 16: ದೇಶದ ಭವಿಷ್ಯ ಪ್ರಜ್ಞಾವಂತ ಮತದಾರರ ಕೈಯಲ್ಲಿದೆ. ಅವರು ತಮ್ಮ ತಮ್ಮ ಮತವನ್ನು ದಾನ ಮಾಡುವ ಮೂಲಕ ಈ ದೇಶದ ಭವಿಷ್ಯ ನಿರ್ಧರಿಸುವ ಗುರುತರ ಜವಾಬ್ದಾರಿ ಅವರ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಆದ್ದರಿಂದ ನಿರ್ಭತಿ ಮತದಾನ ಮಾಡುವ ಮೂಲಕ ದೇಶ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು. 

ಪುರಸಭೆ ಆವರಣದಲ್ಲಿ ನಡೆದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮತ ಪ್ರಮಾಣ ಹೆಚ್ಚಳ ಮಾಡುವ ಸಲುವಾಗಿ, ಮತದಾನ ಮಹತ್ವ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾತಾಗೆ ನಗರದ ಪುರಸಭೆಯಿಂದ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬರು ಮುಂಬರುವ ಲೋಕಸಭೆ ಚುನಾವಣೆಯ ಮತದಾನದಲ್ಲಿ ಎಲ್ಲರೂ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮರದಾರರಲ್ಲಿ ಮನವಿ ಮಾಡಿದರು. 

ಜಿಲ್ಲಾಧಿಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನಗರಾಭಿವೃದ್ಧಿ ಹಾಗೂ ಜಿಲ್ಲಾ ಸ್ವಿಪ್ ಸಮಿತಿ ಬಾಗಲಕೋಟ ತಾಲೂಕಾ ಆಡಳಿತ ತಾಲೂಕಾ ಸ್ವಿಪ್ ಸಮಿತಿ ಹಾಗೂ ಪುರಸಭೆ ಕಛೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗ್ರತಿ ಅಭಿಯಾನದಲ್ಲಿ ಮಾತನಾಡಿದ ಪುರಸಭೆ ಅಧಿಕಾರಿ ಎಸ್ ಏನ್ ಪಾಟೀಲ್ ಕಳೆದ್ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಭೂತಗಳಲ್ಲಿ ಈ ಬಾರಿ ಹೆಚ್ಚಿನ ಮಾತಾದಾನಕ್ಕೆ ಪ್ರೇರಣೆ ನೀಡುವುದಕ್ಕಾಗಿ ಈ ಅಭಿಯಾನ ಆಯೋಜಿಸಲಾಗಿದೆ. 

ಮತದಾನ ಪ್ರತಿಯೊಬ್ಬರ ಹಕ್ಕು ದೇಶದ ಉಜ್ವಲ ಭವಿಷ್ಯಕ್ಕಾಗಿ ಮತ ಅತೀ ಮುಖ್ಯವಾಗಿದೆ. ಯಾವುದೇ ಅಸೆ ಆಮಿಷಕ್ಕೆ ಬಲಿಯಾಗದೆ ಸ್ವತಂತ್ರವಾಗಿ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದರು. 

ಇಂದಿನ ಮತದಾನ ಜಾಗೃತಿ ಜಾಥಾದಲ್ಲಿ ಪುರಸಭೆ ಪೌರ ಕಾರ್ಮಿಕರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಪುರಸಭೆಯಿಂದ ಹೊರಟ ಜಾಥಾ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಡಬ್ಬಲ ರಸ್ತೆ,ಜೋಳದ ಬಜಾರ, ನಡುಚೌಕಿ, ಜವಳಿ ಬಜಾರ ಮಾರ್ಗವಾಗಿ ಸಂಚರಿಸಿ ಪುರಸಭೆ ತಲುಪಿ ಸಮಾಪ್ತಿಯಾಯಿತು. 

ಮಾಡ ಬನ್ನಿ ಮತದಾನ ಇದುವೇ ನಮ್ಮ ಶ್ರಮದಾನ ಎಂಬ ಹೊಸ ಕನಸು ಬಿತ್ತಿ ಸದೃಢ ದೇಶ ಕಟ್ಟೋಣ ಅರ್ಹ ಮತದಾರರೆಲ್ಲರೂ ತಪ್ಪದೆ ಮತ ಚಲಾಯಿಸಿ,ಇಲ್ಲಿ ಎಲ್ಲರೂ ಸಮಾನರು ಎಲ್ಲರ ಮತವು ಅಮೂಲ್ಯ,ಕುಟುಂಬ ಹಾಗೂ ನೆರೆಹೊರೆಯವರನ್ನು ಮತಗಟ್ಟೆಗೆ ಕರೆದುಕೊಂಡು ಬನ್ನಿ ಎಂದು ಕರೆ ನೀಡಿದರು. 

ಪುರಸಭೆ ಸಿಬ್ಬಂದಿ ಎಸ್ ಏನ್ ಪಾಟೀಲ್, ವಿ ಜಿ ಕುಲಕರ್ಣಿ, ಭೀಮಣ್ಣ ಮರಡಿ ಎಂ ಎಂ ಮುಗಳಖೊಡ, ಸಹಾಯಕ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿ ಸೇರಿ ಹಲವರು ಇದ್ದರು.