ನೇಮಿರಾಜ್ ನಾಯ್ಕ್‌ಗೆ ಗೆಲುವು: ಕಾರ್ಯಕರ್ತರಿಂದ ಅನ್ನ ಸಂತರ್ಪಣೆ

ಹಗರಿಬೊಮ್ಮನಹಳ್ಳಿ.ಮೇ.26 : ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ಊರಿನ 4ನೇ ವಾರ್ಡ್‌ನ ಜೆ ಜೆ ನಗರದ ದುರ್ಗಮ್ಮ ದೇವಸ್ಥಾನದಲ್ಲಿ ಶುಕ್ರವಾರ ಶಾಸಕ ನೇಮಿರಾಜ್ ನಾಯ್ಕ್‌ಗೆ ಸಂದ ಗೆಲುವಿಗಾಗಿ ಕಾರ್ಯಕರ್ತರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. 

ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ನೇಮಿರಾಜ್ ನಾಯ್ಕ್‌ ಭಾಗಿಯಾಗಿ ಇದು ಸ್ವಾಭಿಮಾನಿ ಗೆಲುವಾಗಿದೆ, ಕ್ಷೇತ್ರಾಧ್ಯಾಂತ ನನಗೆ ಅಭೂತ ಪೂರ್ವ ಸ್ಪಂದನೆ ನೀಡಿ ಆಯ್ಕೆ ಮಡಿದ್ದಕ್ಕೆ ನಾನು ಎಂದಿಗೂ ಚಿರಋಣಿಯಾಗಿದ್ದೆನೆ ಇದು ನನ್ನ ಗೆಲುವಲ್ಲ ನಿಮ್ಮಗಳ ಗೆಲುವಾಗಿದೆ, ಹಸ್ತ ಲಾಘವದ ಅಭಿಮಾನವಿರಲಿ ಶಾಲು ಹಾರ ತುರಾಯಿಗಳ ಭರಾಟೆ ಬೇಡ, ಕ್ಷೇತ್ರದಲ್ಲಿನ ಮೂಲೆ ಮೂಲೆಯಲ್ಲಿನ ಸಮಸ್ಯೆಗಳ ಬೆಳಕಿಗೆ ತಂದು ಅವುಗಳ ಪರಿಹಾರಕ್ಕೆ ಮುಂದಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು, ಕ್ಷೇತ್ರದ ಕಟ್ಟಕಡೆಯ ಗ್ರಾಮವನ್ನೂ ಪರಗಣಿಸಿ ಅಭಿವೃಧ್ಧಿಯ ಪಥದತ್ತ ಸಾಗಿಸುವುದಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಲ್ಲಿ ಯಾವ ಅಭಿವೃಧ್ಧಿ ಕಾರ್ಯಗಳು ಆಗಬೇಕಿದೆ ಅವುಗಳನ್ನು ಗಮನಕ್ಕೆ ತರುವಂತೆ ತಿಳಿಸಿದರು. 

ಈ ಸಂಧರ್ಭದಲ್ಲಿ 101 ತೆಂಗಿನ ಕಾಯಿಗಳನ್ನು ಒಡೆಯಲಾಯಿತು. ಇ ಕೆ ಮೂರ್ತಿ, ಗುತ್ತಿಗೆದಾರ ತಿರುಮಲೇಶ್, ಶಬ್ಬೀರ್, ಪುರಸಭೆ ಸದಸ್ಯ ವೀರೇಶ್, ಹೆಚ್‌.ಎಂ ವಿಜಯಕುಮಾರ, ಚಿತವಾಡ್ಗಿ ಪ್ರಕಾಶ್, ರೆಡ್ಡಿ ಕೊಟ್ರೇಶ್, ಎನ್‌.ಎಂ ಸುಧಾಕರ, ಹೆಚ್ ಎಂ ಗಂಗಯ್ಯ, ಗಣೇಶ್ ಸೇರಿದಂತೆ ವಾರ್ಡ್‌ನ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.