ಹಿರಿಯ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ಇನ್ನಿಲ್ಲ

ಕುಕನೂರು 11: ನಾಡಿನ ಹೆಸರಾಂತ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ(89) ವಯೋ ಸಹಜ ಕಾಯಿಲೆಯಿಂದ ಭಾನುವಾರ ಬೆಳಗ್ಗೆ ಕುಕನೂರು ಪಟ್ಟಣದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.          

ಬಾಬಣ್ಣ ಕಲ್ಮನಿಯವರು, ಪ್ರತಿಷ್ಠಿತ ಗುಬ್ಬಿ ವೀರಣ್ಣ ರಾಜ್ಯ ಪ್ರಶಸ್ತಿ 2022ರ ವಿಜೇತರು ಆಗಿದ್ದರು. ಪ್ರಶಸ್ತಿ ಘೋಷಣೆಯೊಂದೇ ಆಗಿದ್ದು ಪ್ರಶಸ್ತಿ ಪ್ರಧಾನ ವಂಚಿತರಾಗಿದ್ದರು. ಹಿರಿಯ ರಂಗಭೂಮಿ ಕಲಾವಿದರು, ಹೆಸರಾಂತ ಅಭಿನೆತ್ರಿ ರಾಜ್ಯೋತ್ಸವ ಪುರುಸ್ಕೃತ ರೆಹಮಾನವ್ವ ಕಲ್ಮನಿ ರವರ ಸುಪುತ್ರರಾಗಿದ್ದ ಬಾಬಣ್ಣ ರಂಗಭೂಮಿ ಕಲಾವಿದರಾಗಿ, ದೂರದರ್ಶನ ಮತ್ತು ಚಲನಚಿತ್ರ ನಟರಾಗಿ ಅವರು ಹೆಸರಾಗಿದ್ದರು. 1993ರಲ್ಲಿ ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯರು ಇದ್ದಾರೆ.