12ರಿಂದ ಉಗರಗೋಳದಲ್ಲಿ ವೈದಿಕ ಸಂಸ್ಕಾರ ಶಿಬಿರ
ಉಗರಗೋಳ 07: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಶ್ರೀಮದ್ ವೀರಶೈವ ಸಂಸ್ಕೃತ ವೇದಪಾಠಶಾಲೆಯ ವತಿಯಿಂದ ಏ.12 ರಿಂದ ಮೇ 12ರವರೆಗೆ ವೀರಶೈವ ವೀರಮಾಹೇಶ್ವರ ಜಂಗಮ ಬಂಧುಗಳಿಗಾಗಿ ವೈದಿಕ ಸಂಸ್ಕಾರ ಶಿಬಿರ ಏರಿ್ಡಸಲಾಗಿದೆ.
ಈ ಶಿಬಿರದಲ್ಲಿ ವಿಶೇಷವಾಗಿ ವೀರಶೈವ ಧರ್ಮದ ಆಚಾರ-ವಿಚಾರ, ವೈದಿಕ ಶಿವಪೂಜಾ ವಿಧಾನ, ಷೋಡಶೋಪಚಾರ ವೇದೋಕ್ತ ಮಂತ್ರಗಳ ಪಠಣ, ರುದ್ರಾಭಿಷೇಕ ಮಾಡುವ ವಿಧಾನ ಮತ್ತು ರುದ್ರ ಪಠಣ, ಶವ ಸಂಸ್ಕಾರ ವಿಧಿ-ವಿಧಾನ, ವಿವಿಧ ಮಂಗಳಾರತಿ ಪದ್ಯಗಳ ಕಲಿಕೆ, ಜೊತೆಗೆ ಪ್ರಾತಃಕಾಲದಲ್ಲಿ ಯೋಗಾಭ್ಯಾಸ ತರಬೇತಿ ನೀಡಲಾಗುವುದು.
ಆಸಕ್ತ ವೀರಶೈವ ವೀರಮಾಹೇಶ್ವರ ಜಂಗಮ ಬಂಧುಗಳು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ವಾಸ್ತವ್ಯಕ್ಕೆ ಎಲ್ಲ ರೀತಿಯ ಏರ್ಾಟು ಇದ್ದು, ಒಂದು ತಿಂಗಳು ಮಠದಲ್ಲಿ ಇದ್ದುಕೊಂಡು ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಈ ಶಿಬಿರದ ಹೆಚ್ಚಿನ ಮಾಹಿತಿಗಾಗಿ 8660693154, 9845480675 ಅಥವಾ 7022427595 ಮೊಬೈಲ್ಗೆ ಸಂಪರ್ಕಿಸಬೇಕೆಂದು ಶಿಬಿರದ ಸಂಚಾಲಕರುಗಳಾದ ವೀರಯ್ಯಶಾಸ್ತ್ರಿಗಳು ಹಾಗೂ ವ್ಹಿ. ವ್ಹಿ. ಪದಕಿಮಠ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.