ವಾಜಪೇಯಿ ಜನ್ಮದಿನ ಆಚರಣೆ


ಗುಳೇದಗುಡ್ಡ,ಡಿ26: ಗುಳೇದಗುಡ್ಡದಲ್ಲಿ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು ನಗರ ಘಟಕದ ಬಿಜೆಪಿ ಕಾರ್ಯಕರ್ತರು ಗೋಶಾಲೆಯಲ್ಲಿ ಶನಿವಾರ ಆಚರಿಸಿದರು.  

   ಗೋವುಗಳಿಗೆ ಮೇವು ನೀಡಿ, ಸಮಾಜದ ಗೋರಕ್ಷಕರಿಗೆ, ಪ್ರಾಣಿ ಪ್ರೇಮಿಗಳಿಗೆ, ಕೇಸರಿ ನಂದನ ತಂಡದವರಿಗೆ ಸೇರಿದಂತೆ ಸಮಾಜ ಸೇವಕರಿಗೆ ಸ್ಮಾನ ಮಾಡಲಾಯಿತು. 

    ಇಲ್ಲಿನ ಮಾಜಿ ಶಾಸಕ ರಾಜಶೇಖರ ಶೀಲವಂತ ಮಾಜಿ ಪ್ರಧಾನಿ ಅಜಾತಶತ್ರು ಅಟಲ್‌ಬಿಹಾರಿ ವಾಜಪೇಯಿ ಅವರ ಕುರಿತು ಮಾತನಾಡಿದರು. ರಂಗಪ್ಪ ಶೇಬಿನಕಟ್ಟಿ, ಮಧುಸೂಧನ ರಾಂದಡ, ಸಂಪತ್‌ಕುಮಾರ ರಾಠಿ, ಕಮಲಕಿಶೋರ ಮಾಲಪಾಣಿ, ಸಿದ್ದು ಅರಕಾಲಚಿಟ್ಟಿ, ದೀಪಕ ನೇಮದಿ, ಬಿ.ಜೆ.ಪಿ. ನಗರ ಘಟಕದ ಅಧ್ಯಕ್ಷ ವಸಂತ ದೊಂಗಡೆ, ಯುವ ಮೋರ್ಚಾದ ಅಧ್ಯಕ್ಷ ರಾಜು ಗೌಡರ್, ಬಾಲಕೃಷ್ಣ ನಿರಂಜನ, ಮಹಿಳಾ ಮೋರ್ಚಾದ ಭಾಗ್ಯಾ ಉದ್ನೂರ, ಜೋಗೂರ ಸೇರಿದಂತೆ ಇತರರು ಇದ್ದರು.