ನಸಲಾಪುರ ಗ್ರಾಮದಲ್ಲಿ ಸನ್ಮತಿ ನಗರ ನಾಮಫಲಕದ ಅನಾವರಣ

ಮಾಂಜರಿ 22: ಸಮೀಪದ ಧರ್ಮ ನಗರಿಯಾದ ನಸಲಾಪುರ ಗ್ರಾಮದಲ್ಲಿ ಸನ್ಮತಿ ನಗರದ ನಾಮಫಲಕದ ಅನಾವರಣವನ್ನು ಚಿಕ್ಕೋಡಿ ದಿಯಾ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಸಂಜಯ್ ಪಾಟೀಲ್ ಅವರು ನೆರವೇರಿಸಿದರು.  

ಸಸಿ ನೆಡುವ ಕಾರ್ಯಕ್ರಮಕ್ಕೆ ಗ್ರಾಮದ ಧುರೀಣರಾದ ಹಾಗೂ ಚಿದಾನಂದ ಬಸಪ್ರಭ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಭರತೇಶ ಶಾಂತಪ್ಪಾ ಬನವಣೆ ಅವರು ಚಾಲನೆ ನೀಡಿ, ಮರಗಳು ಮನುಷ್ಯರ ಜೀವನಾಡಿ ಇದ್ದಂತೆ ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ವೃಕ್ಷಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕೆಂದು ಹೇಳಿದರು. ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪರಿಸರ ಶುದ್ಧವಾಗಿರುವಲ್ಲಿ ವೃಕ್ಷಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಕಾರ್ಯಕ್ಕೆ ಯುವ ಸಮುದಾಯ ಜಾಗೃತರಾಗಬೇಕೆಂದು ಡಾ ಸಂಜಯ್ ಪಾಟೀಲ್ ಹೇಳಿದರು. 

ದಿಯಾ ಆಸ್ಪತ್ರೆಯ ವೈಧ್ಯ ಡಾ. ಸಂಜಯ ಪಾಟೀಲ ಅವರನ್ನು ಹಾಗೂ ವಿವಿಧ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಗ್ರಾಮದ ಗಣ್ಯರಾದ ಭಾವುಸಾಹೇಬ ಪಾಟೀಲ, ಜಯಪಾಲ ಬನವಣೆ ಪಾನಗೌಡಾ ಪಾಟೀಲ, ರಾಜು ಪರಮಾಜೆ, ನಿಂಗಪ್ಪ ಕುಂಬಾರ, ಆನಂದ ಸಮಾಜೆ, ಅಣ್ಣಾಸಾಬ ಸಮಾಜೆ, ಸಂತೋಷ ಶೇಡಬಾಳೆ, ರಾಜು ಪಾಟೀಲ್, ಸಂಜು ಪಾಟೀಲ್, ಅಜೀತನಾಥ ಪಾಟೀಲ, ಸಂತೋಷ ಪಾಟೀಲ, ಡಾ. ಸಂಜಯ ಪಾಟೀಲ ಗ್ರಾಮ ಪಂಚಾಯತ ಸದಸ್ಯರು, ಸನ್ಮತಿ ನಗರದ ಕಾರ್ಯಕರ್ತರು, ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗ್ರಾಮದ ನಾಗರಿಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.