ಅವೈಜ್ಞಾನಿಕ ಒಳ ಸೇತುವೆ ನಿರ್ಮಾಣ : ಬೆಳೆ ಹಾನಿ, ರೈತರ ಪ್ರತಿಭಟನೆ
ಲೋಕದರ್ಶನವರದಿ
ರಾಣೇಬೆನ್ನೂರು09: ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ನಗರ ಹೊರವಲಯದ ದೇವರಗುಡ್ಡ ರಸ್ತೆಯ ಹೊಸದಾಗಿ ನಿಮರ್ಿಸಲಾಗುತ್ತಿವರು ರೈಲ್ವೆ ಒಳ ಸೇತುವೆಯಲ್ಲಿ ನದಿ ಆಕಾರದಲ್ಲಿ ನೀರು ತುಂಬಿದ್ದರಿಂದ ಹರಿದ ನೀರು ಹೊಲಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿಗಳ ಗೋವಿನಜೋಳ ಬೆಳೆಗಳು ಸಂಪೂರ್ಣ ಹಾನಿಗೊಂಡಿದೆ. ಸ್ಥಳಕ್ಕೆ ಧಾವಿಸದ ಜಮೀನು ಮಾಲೀಕರು ನೀರಾವೃತಗೊಂಡು ಹಾನಿಗೊಳಗಾದ ಬೆಳೆಗಳನ್ನು ಕಿತ್ತು ರಸ್ತೆಗೆ ಚಲ್ಲಿ ಪ್ರತಿಭಟಿಸಿದರು.
ಈ ರಸ್ತೆಯು ಬಾಗಲಕೋಟೆ, ಬಿಳಿಗಿರಿ ರಂಗನಬೆಟ್ಟ ಸಂಚಾರಿ ಸಂಪರ್ಕ ರಸ್ತೆಯಾಗಿದ್ದು, ಒಳ ಸೇತುವೆ ನಿಮರ್ಾಣದಿಂದ ಯಾವುದೇ ಪ್ರಯೋಜನ ಕಾಣದಂತಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಕೂಡಲೇ ಇಲ್ಲಿ ಮೇಲ್ಸೇತುವೆ ನಿರ್ಮಾಣವಾಗಬೇಕು ಇದರಿಂದ ಸಂಚಾರ ಸುಗಮವಾಗಲಿದೆ.
ಇಲ್ಲವಾದರೆ, ಈ ಭಾಗದ ಸಂಚಾರ ಸುಗಮ ಕಾಣದೇ ನಿತ್ಯ ಜನ-ಜಾನುವಾರುಗಳು, ವಾಹನಗಳಿಗೆ ಸಂಪರ್ಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾ ನಿರತರು ಮತ್ತು ಹುಲ್ಲತ್ತಿ, ನಗರದ ನಾಗರೀಕರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ ಕೆರೋಡಿ, ಪ್ರಭುಸ್ವಾಮಿ ಕರ್ಜಗಿಮಠ ಸೇರಿದಂತೆ ನೂರಾರು ರೈತರು ಪಾಲ್ಗೊಂಡ್ಡಿದರು.
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ 