ಸಮವಸ್ತ್ರ ವಿತರಣೆ ಸಮಾರಂಭ

ಕಾರಟಗಿ  04: ಸರಕಾರಿ ಶಾಲೆಗಳು ಶಿಕ್ಷಣ ಜೊತೆಗೆ ಮಕ್ಕಳಿಗೆ ಉಚಿತವಾಗಿ ಕೇಳಿದ್ದನ್ನು ಕೊಡುವ ಕಾಮದೇನುಯಾಗಿವೆ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿರೇಶ ಬಡಿಗೆರ ಮಾತನಾಡಿದರು.  

ಅವರು ಮರ್ಲಾನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಮವಸ್ತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು ನಂತರ ಸಹಶಿಕ್ಷಕ ಅಂಜಿನಯ್ಯ ಮತ್ತು  ವಿದ್ಯಾರ್ಥಿಗಳು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಸಾವಿತ್ರಿ ಮಲ್ಲನಗೌಡ ಕಾವೇರಿ ಬಾಯಿ ವಸುಧಾ ಪುಷ್ಪಾ ಪ್ರಶಿಕ್ಷಣಾರ್ಥಿ ಉಮಾ ಸುವರ್ಣ ರಮಂಜಾನಬಿ ರಾಜೇಶ್ವರಿ ಜ್ಯೋತಿ ಸೇರಿದಂತೆ  ಶಾಲೆಯ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.